ಸಂಜೆ 6 ಗಂಟೆನಂತರ ಈ ವಸ್ತುಗಳನ್ನು ಮನೆಯಿಂದ ಹೊರಗೆ ಕೊಡಬಾರದು!

ದಾನ ಮಾಡುವುದರಿಂದ ಪುಣ್ಯ ಪ್ರಾಪ್ತಿಯಾಗುತ್ತದೆ ಎಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ. ಆದರೆ ಸೂರ್ಯಾಸ್ತದ ನಂತರ ಈ ವಸ್ತುಗಳನ್ನು ದಾನ ಮಾಡುವುದು ಒಳ್ಳೆಯದಲ್ಲ.

ಹಿಂದೂ ಧರ್ಮದಲ್ಲಿ ದಾನಕ್ಕೆ ವಿಶೇಷ ಮಹತ್ವ ಇದೆ. ದಾನ ಮಾಡುವುದರಿಂದ ವ್ಯಕ್ತಿಯೂ ಆತ್ಮ ಸಂತೋಷದ ಜೊತೆ ಪುಣ್ಯವನ್ನು ಕೂಡ ಗಳಿಸುತ್ತಾನೆ ಎಂದು ಶಾಸ್ತ್ರದಲ್ಲಿ ತಿಳಿಸಲಾಗಿದೆ. ದಾನ ಮಾಡುವ ವ್ಯಕ್ತಿಯ ಮೇಲೆ ದೇವರ ಕೃಪೆ ಇರುತ್ತದೆ. ಆದರೆ, ಈ ದಾನ ಮಾಡುವ ವಿಚಾರದಲ್ಲಿ ಕೆಲವು ನಿಯಮಗಳನ್ನು ಜ್ಯೋತಿಷ್ಯಶಾಸ್ತ್ರದಲ್ಲಿ ತಿಳಿಸಲಾಗಿದೆ.

ದಾನ ಮಾಡಲು ಸರಿಯಾದ ಸಮಯದ ಕುರಿತು ತಿಳಿಸಲಾಗಿದೆ. ಈ ಸಂಪ್ರದಾಯ ಶತಮಾನಗಳಿಂದ ನಡೆದುಕೊಂಡು ಬಂದಿದೆತಪ್ಪಾದ ಸಮಯದಲ್ಲಿ ದಾನ ಮಾಡುವುದು ಸಮಸ್ಯೆಗೆ ಗುರಿಯಾಗಬಹುದು.

ದಾನ ಮಾಡುವುದರಿಂದ ಪುಣ್ಯ ಪ್ರಾಪ್ತಿಯಾಗುತ್ತದೆ ಎಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ. ಆದರೆ ಸೂರ್ಯಾಸ್ತದ ನಂತರ ಯಾವ ವಸ್ತುಗಳನ್ನು ದಾನ ಮಾಡುವುದು ಒಳ್ಳೆಯದಲ್ಲ.

ಕೆಲವು ವಸ್ತುಗಳನ್ನು ಸೂರ್ಯಾಸ್ತದ ನಂತರ ತಪ್ಪಾಗಿಯೂ ಯಾರಿಗೂ ನೀಡಬಾರದು ಎಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ. ಸೂರ್ಯಾಸ್ತದ ನಂತರ ಈ ವಸ್ತುಗಳನ್ನು ದಾನ ಮಾಡುವುದು ಮಂಗಳಕರವೆಂದು ಪರಿಗಣಿಸಲಾಗುವುದಿಲ್ಲ

ಶಾಸ್ತ್ರಗಳ ಪ್ರಕಾರ, ಸೂರ್ಯಾಸ್ತದ ನಂತರ ಯಾವುದೇ ಸಾಲದ ವ್ಯವಹಾರವನ್ನು ಮಾಡಬಾರದು. ಸಂಜೆ ವೇಳೆ ಬೇರೆಯವರಿಂದ ಹಣ ಪಡೆದು ಮಾಡುವ ಕೆಲಸ ಎಂದಿಗೂ ಸಫಲವಾಗುವುದಿಲ್ಲ ಎಂಬ ಮಾತಿದೆ.

ಇಷ್ಟು ಮಾತ್ರವಲ್ಲದೆ ಸಂಜೆಯ ವೇಳೆಯಲ್ಲಿ ಹಣವನ್ನು ಎರವಲು ಪಡೆಯುವ ಮೂಲಕ ಇತರರ ಋಣಾತ್ಮಕತೆ ನಿಮ್ಮ ಬಳಿಗೆ ಬರುತ್ತದೆ.

ರಾತ್ರಿ ಸಮಯದಲ್ಲಿ ಹಾಲು ಅಥವಾ ಮೊಸರನ್ನು ದಾನ ಮಾಡಬಾರದು ಎಂದು ನಂಬಲಾಗಿದೆ. ಹಾಲು ಚಂದ್ರ ಮತ್ತು ಸೂರ್ಯನಿಗೆ ಸಂಬಂಧಿಸಿದೆ. ಶುಕ್ರನೊಂದಿಗೆ ಮೊಸರಿನ ಸಂಬಂಧವನ್ನು ಹೇಳಲಾಗಿದೆ. ಸೂರ್ಯಾಸ್ತದ ನಂತರ ಹಾಲು, ಮೊಸರು ದಾನ ಮಾಡುವುದರಿಂದ ಜೀವನದಲ್ಲಿ ಸುಖದ ಕೊರತೆ ಉಂಟಾಗುತ್ತದೆ ಎಂಬ ನಂಬಿಕೆ ಇದೆ.

ಸೂರ್ಯಾಸ್ತದ ನಂತರ, ಬೆಳ್ಳುಳ್ಳಿ ಅಥವಾ ಈರುಳ್ಳಿಯನ್ನು ಕೇಳಿದರೆ, ಕೊಡಬೇಡಿ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಬೆಳ್ಳುಳ್ಳಿ ಮತ್ತು ಈರುಳ್ಳಿಯ ಸಂಬಂಧವನ್ನು ಕೇತುವಿನ ಜೊತೆ ಸಂಬಂಧ ಹೊಂದಿದೆ ಹೇಳಲಾಗುತ್ತದೆ. ಕೇತುವನ್ನು ಮೇಲಿನ ಶಕ್ತಿಗಳ ಅಧಿಪತಿ ಎಂದು ಹೇಳಲಾಗುತ್ತದೆ. ಸೂರ್ಯಾಸ್ತದ ನಂತರ ಈ ವಸ್ತುಗಳ ವ್ಯವಹಾರವನ್ನು ಅಶುಭವೆಂದು ಪರಿಗಣಿಸಲಾಗುತ್ತದೆ.

Related Post

Leave a Comment