ಅತೀ ಸರಳ ತಂತ್ರದಿಂದ ಎಲ್ಲಾ ಹಣದ ಸಮಸ್ಸೆಗಳಿಂದ ಮುಕ್ತಿಹೊಂದಿ!

ನಕಾರಾತ್ಮಕ ಶಕ್ತಿಯನ್ನು ಯಾವ ಮನೆಯಲ್ಲಿ ಹೆಚ್ಚಾಗಿ ಇರುತ್ತದೆಯೋ ಅಂತಹ ಮನೆಯಲ್ಲಿ ಲಕ್ಷ್ಮಿ ನೆಲೆಸುವುದಿಲ್ಲ ಮತ್ತು ಏಳಿಗೆ ಅನ್ನೋದು ಕೂಡ ಆಗುವುದಿಲ್ಲ. ಪದೇ ಪದೇ ಜಗಳ ಕದನಗಳು ಮುಖ್ಯವಾಗಿ ಹಣಕಾಸಿನ ಸಮಸ್ಸೆಗಳು ಹೆಚ್ಚಾಗಿ ಕಾಡುತ್ತದೆ. ಇಂತಹ ನಕಾರಾತ್ಮಕ ಶಕ್ತಿಯನ್ನು ಮನೆಯಲ್ಲಿ ಕಡಿಮೆ ಮಾಡಿಕೊಳ್ಳುವುದು ಹೇಗೆ ಎಂದು ಈ ಲೇಖನದಲ್ಲಿ ತಿಳಿಸಿಕೊಡುತ್ತೇವೆ.

ಈ ಒಂದು ಪರಿಹಾರವನ್ನು ವಾರಕ್ಕೆ ಒಮ್ಮೆ ಅಥವಾ ತಿಂಗಳಿಗೆ ಒಮ್ಮೆ ಮಾಡಿಕೊಳ್ಳಬಹುದು. ಅದರಲ್ಲೂ ಹುಣ್ಣಿಮೆ ದಿನ ಮಾಡಿಕೊಂಡರೆ ಒಳ್ಳೆಯದು ಮತ್ತು ವಾರಕ್ಕೆ ಮಾಡಿಕೊಳ್ಳುವವರು ಶುಕ್ರವಾರ ಮಾಡಿದರೆ ಒಳ್ಳೆಯದು. ಈ ಪರಿಹಾರ ಮಾಡುವುದಕ್ಕೆ ಒಂದು ಮಣ್ಣಿನ ದೀಪ ಬೇಕಾಗುತ್ತದೆ. ಈ ಮಣ್ಣಿನ ದೀಪದ ಒಳಗೆ,ಲವಂಗ, ಕರ್ಪೂರ, ಏಲಕ್ಕಿ, ಸಾಮ್ರಾಣಿ ದೂಪ, ಒಂದು ಚಮಚ ಶುದ್ಧವಾದ ತುಪ್ಪ, ಒಂದು ಪಲಾವ್ ಎಲೆ ಹಾಕಿ ಬೆಂಕಿಯನ್ನು ಹಚ್ಚಬೇಕು.

ದೀಪ ಉರಿಯುವ ಸಮಯದಲ್ಲಿ ನಿಮ್ಮ ಮನಸ್ಸಿನಲ್ಲಿ ಏನೇನು ಕಷ್ಟ ಇದೆ ಮತ್ತು ನಿಮ್ಮ ಕನಸುಗಳನ್ನು ಹೇಳಿಕೊಳ್ಳಿ. ಇನ್ನು ದೀಪವನ್ನು ತಲೆ ಸ್ನಾನ ಮಾಡಿ ಬ್ರಾಹ್ಮೀ ಮುಹೂರ್ತದಲ್ಲಿ ಮಾಡಬೇಕು. ಮೊದಲು ದೇವರ ಪೂಜೆ ಮಾಡಿದ ನಂತರ ಈ ಒಂದು ಪರಿಹಾರವನ್ನು ಮಾಡಬೇಕು. ದೀಪ ಉರಿದ ನಂತರ ಅದರಲ್ಲಿ ಕಪ್ಪು ಭಸ್ಮ ಇರುತ್ತದೆ. ಅದನ್ನು ನೀವು ಪ್ರತಿದಿನ ಹಚ್ಚಿಕೊಳ್ಳಬೇಕು. ಈ ರೀತಿ ಮಾಡಿದರೆ ಯಾವುದೇ ಒಂದು ನೆಗೆಟಿವ್ ಎನರ್ಜಿ ಹತ್ತಿರಕ್ಕೆ ಬರುವುದಿಲ್ಲ ಮತ್ತು ಸಾಕಷ್ಟು ಬದಲಾವಣೆಯನ್ನು ನೀವು ಕಾಣುತ್ತಿರ. ಇನ್ನು ಇದರಿಂದ ಬರುವ ಸಾಮ್ರಾಣಿ ಹೊಗೆಯನ್ನು ಮನೆಯ ಮೂಲೆ ಮೂಲೆಗೂ ತೋರಿಸಬೇಕು.

Related Post

Leave a Comment