ತಿಂದ ಆಹಾರ ಜೀರ್ಣವಾಗಿ ಬೆಳಿಗ್ಗೆ ಸರಾಗವಾಗಿ ಬರಲು ಈ ಆಹಾರವನ್ನು ಸೇವಿಸಿ ನೋಡಿ!

ಕೆಲವರಿಗೆ ಅದೆಷ್ಟು ಹೊಟ್ಟೆಯ ಸಮಸ್ಯೆ ಎಂದರೆ ಏನು ತಿಂದರೂ ಅಜೀರ್ಣ, ಗ್ಯಾಸ್ಟ್ರಿಕ್‌ ಸಮಸ್ಯೆ ಕಾಡುತ್ತದೆ. ಒಂದು ಬಾರಿ ಜೀರ್ಣಕ್ರಿಯೆ ಹದಗೆಟ್ಟರೆ ಸರಿಯಾಗಲು ಅನೇಕ ದಿನಗಳೇ ಬೇಕಾಗುತ್ತದೆ.

ಅಂತಹ ಸಂದರ್ಭದಲ್ಲಿ ಆಹಾರದ ಆಯ್ಕೆಯಲ್ಲಿ ಹೆಚ್ಚು ಎಚ್ಚರಿಕೆಯಿಂದ ಇರುವುದು ಅಗತ್ಯವಾಗಿರುತ್ತದೆ. ಏಕೆಂದರೆ ಮತ್ತಷ್ಟು ಹೊಟ್ಟೆಯ ಸಮಸ್ಯೆಗೆ ಕಾರಣಾಗುವ ಆಹಾರಗಳನ್ನು ಸೇವನೆ ಮಾಡುವುದು ಗಂಭೀರ ಕಾಯಿಲೆಗೆ ನಾಂದಿಯಾಗಬಹುದು.ಹಾಗಾದರೆ ಡೈಜೆಸ್ಟಿವ್‌ ಸಿಸ್ಟಮ್‌ ಸರಿಯಾಗಿಟ್ಟುಕೊಳ್ಳಲು ಏನೆಲ್ಲಾ ಮದ್ದು ಮಾಡಬಹುದು ಎನ್ನುವ ಮಾಹಿತಿ ಇಲ್ಲಿದೆ.

​ಅರಿಶಿನದ ಬಳಕೆ

ಸಾಮಾನ್ಯವಾಗಿ ಎಲ್ಲರ ಮನೆಗಳಲ್ಲಿ ಆಹಾರ ತಯಾರಿಸುವಾಗ ಚಿಟಿಕೆ ಅರಿಶಿನವನ್ನು ಬಳಸಿಯೇ ಬಳಸುತ್ತಾರೆ. ಅರಿಶಿನದಲ್ಲಿ ಉರಿಯೂತವನ್ನು ನಿವಾರಿಸುವ ಗುಣವನ್ನು ಹೊಂದಿದೆ. ಅಲ್ಲದೆ ಆಂಟಿಆಕ್ಸಿಡೆಂಟ್‌ಗಳನ್ನು ಹೊಂದಿರುವ ಅರಿಶಿನ ಹೊಟ್ಟೆಯಲ್ಲಿನ ಕೆಟ್ಟ ಬ್ಯಾಕ್ಟೀರಿಯಾಗಳನ್ನು ನಾಶಪಡಿಸಿ ಜೀರ್ಣಕ್ರಿಯೆ ಉತ್ತಮವಾಗುವಂತೆ ಮಾಡುತ್ತದೆ.

​ಚಿಯಾ ಬೀಜಗಳು

ತಿಂದ ಆಹಾರ ಜೀರ್ಣವಾಗುವಂತೆ ಮಾಡುವಲ್ಲಿ ಚಿಯಾ ಬೀಜಗಳು ಅತ್ಯುತ್ತಮ ಪಾತ್ರವಹಿಸುತ್ತವೆ. ಕರುಳಿನ ಉರಿಯೂತವನ್ನು ನಿವಾರಿಸಿ ಚಯಾಪಚಯ ಕ್ರಿಯೆ ಸರಿಯಾಗಿ ನಡೆಯುವಂತೆ ಮಾಡುತ್ತವೆ.ಅಲ್ಲದೆ ಆಹಾರ ಸರಿಯಾಗಿ ಜೀರ್ಣವಾಗಿ ಮಲವಿಸರ್ಜನೆ ಆಗುವಂತೆ ಮಾಡುವ ಮೂಲಕ ಮಲಬದ್ಧತೆ ಸಮಸ್ಯೆಯನ್ನು ನಿವಾರಣೆ ಮಾಡುತ್ತದೆ. ಹಣ್ಣುಗಳ ಸಲಾಡ್‌ ಜೊತೆ ನೀವು ನೆನೆಸಇದ ಚಿಯಾ ಬೀಜಗಳನ್ನು ಸೇರಿಸಿ ತಿನ್ನಬಹುದು.

​ಪೇರಳೆ ಹಣ್ಣು

ಹೇರಳವಾದ ಫೈಬರ್‌ ಅಂಶವನ್ನು ಹೊಂದಿರುವ ಪೇರಳೆ ಹಣ್ಣು ಜೀರ್ಣಕ್ರಿಯೆ ಸರಿಯಾಗಿರುವಂತೆ ಮಾಡುತ್ತದೆ. ಅಲ್ಲದೆ ಪೇರಳೆ ಹಣ್ಣು ಚರ್ಮ ಹಾಗೂ ಕೂದಲಿನ ಆರೋಗ್ಯಕ್ಕೂ ಬಹಳ ಒಳ್ಳೆಯದು.

ಅದರಲ್ಲೂ ಚಳಿಗಾಲದಲ್ಲಿ ಪೇರಳೆ ಹಣ್ಣನ್ನು ತಿನ್ನುವುದರಿಂದ ತುಸು ಹೆಚ್ಚಿನ ಪ್ರಯೋಜನಗಳನ್ನೇ ಪಡೆಯಬಹುದಾಗಿದೆ.

ಜೀರ್ಣಕ್ರಿಯೆ ಸಹಾಯ ಮಾಡುವ ಆಹಾರ

​ಮೊಸರು

ಉತ್ತಮ ಪ್ರೊಬಯಾಟಿಕ್‌ ಅಂಶಗಳನ್ನು ಒಳಗೊಂಡಿರುವ ಮೊಸರು ಹೊಟ್ಟೆಯ ಸಮಸ್ಯೆಯನ್ನು ನಿವಾರಿಸಿ ತಂಪನೆಯ ಅನುಭವ ನೀಡುತ್ತದೆ.ಕೆಲವೊಮ್ಮೆ ಹೆಚ್ಚು ಮಸಾಲೆ, ಖಾರದ ಆಹಾರ ಸೇವಿಸಿದಾಗ ಹೊಟ್ಟೆಯಲ್ಲಿ ಸಂಕಟ, ಗ್ಯಾಸ್ಟ್ರಿಕ್‌ ಕಾಣಿಸಿಕೊಳ್ಳುತ್ತದೆ. ಅದನ್ನು ನಿವಾರಿಸಲು ಮೊಸರು ಸಹಾಯ ಮಾಡುತ್ತದೆ. ಬಹುಮುಖ್ಯವಾಗಿ ಕರುಳಿನ ಆರೋಗ್ಯವನ್ನು ಉತ್ತಮವಾಗಿಸಲು ಮೊಸರು ಸಹಾಯ ಮಾಡುತ್ತದೆ. ಇದರಿಂದ ಜೀರ್ಣಕ್ರಿಯೆ ಸಮಸ್ಯೆಯಿಂದ ದೂರವಿರಬಹುದು.

​ಶುಂಠಿ

ಆಯುರ್ವೇದದ ಪ್ರಕಾರ ಪ್ರತಿದಿನ ಮಧ್ಯಾಹ್ನ ಊಟ ಮಾಡುವ ಮೊದಲು ಸಣ್ನ ಶುಂಠಿ ಚೂರು ಹಾಗೂ ಉಪ್ಪನ್ನು ಸೇರಿಸಿ ತಿಂದರೆ ಅಜೀರ್ಣ ಅಥವಾ ಜೀರ್ಣಕ್ರಿಯೆಯ ಸಮಸ್ಯೆಯನ್ನು ಶಮನ ಮಾಡಬಹುದು.ಹೀಗಾಗಿ ಆಗಾಗ ಶುಂಠಿಯನ್ನು ಆಹಾರದಲ್ಲಿ ಬಳಕೆ ಮಾಡುತ್ತಿರಿ. ಚಿಕಿತ್ಸೆಯ ರೀತಿಯಲ್ಲಿ ಹೊಟ್ಟೆಯ ಸಮಸ್ಯೆಗೆ ಪರಿಹಾರ ನೀಡುತ್ತದೆ.

Related Post

Leave a Comment