ಮಹಿಳೆಯರು ಕುಂಕುಮವನ್ನು ಈ ದಿನ ಮಾತ್ರ ಖರೀದಿಸಬೇಕು!

ಹಿಂದೂ ಧರ್ಮದಲ್ಲಿ ಕುಂಕುಮವನ್ನು ಅತ್ಯಂತ ಪವಿತ್ರವೆಂದು ಪರಿಗಣಿಸಲಾಗಿದೆ. ಕುಂಕುಮವು ವಿವಾಹಿತ ಮಹಿಳೆಗೆ ಸುಮಂಗಲಿತ್ವದ ಸಂಕೇತವಾಗಿದೆ. ಹಣೆಗೆ ಕುಂಕುಮವನ್ನಿಟ್ಟುಕೊಳ್ಳುವ ಮಹಿಳೆಯರ ಸುಮಂಗಲಿತನ ಅಥವಾ ಸೌಭಾಗ್ಯ ದೀರ್ಘವಾಗಿರುತ್ತದೆ ಎನ್ನುವ ನಂಬಿಕೆಯಿದೆ. ನಂಬಿಕೆಯ ಪ್ರಕಾರ, ವಿವಾಹಿತ ಮಹಿಳೆ ಹಣೆಗೆ ಕುಂಕುಮವನ್ನು ಹಚ್ಚಿಕೊಳ್ಳುವುದರಿಂದ, ಗಂಡನ ಆಯುಷ್ಯವು ದೀರ್ಘವಾಗಿರುತ್ತದೆ ಮತ್ತು ಅವನು ಯಾವಾಗಲೂ ಅದೃಷ್ಟವಂತನಾಗಿರುತ್ತಾನೆ.

ಹಣೆಗೆ ಕುಂಕುಮವನ್ನು ಹಚ್ಚಿಕೊಳ್ಳಲು ಅದರದ್ದೇ ಆದ ನಿಯಮಗಳು ಮತ್ತು ಸಂಪ್ರದಾಯಗಳಿವೆ. ಹಣೆಗೆ ಕುಂಕುಮವನ್ನು ಇಟ್ಟುಕೊಳ್ಳುವುದು ಹೇಗೆ..? ಕುಂಕುಮವನ್ನು ಯಾವಾಗ ನಾವು ಖರೀದಿಸಬೇಕು..? ಇಂತಹ ಅನೇಕ ಪ್ರಶ್ನೆಗಳು ನಿಮ್ಮಲ್ಲಿ ಹುಟ್ಟುಕೊಂಡಿರಬಹುದು ಮತ್ತು ಆ ಪ್ರಶ್ನೆಗಳಿಗೆ ಉತ್ತರವನ್ನು ಹುಡುಕುವಲ್ಲಿ ನೀವು ಪ್ರಯತ್ನಿಸುತ್ತಿರಬಹುದು. ನಿಮ್ಮಲ್ಲಿಯೂ ಈ ಪ್ರಶ್ನೆಗಳಿದ್ದರೆ ಇಲ್ಲಿದೆ ನೋಡಿ ಉತ್ತರ..

ಕುಂಕುಮವನ್ನು ಹೇಗೆ ಹಚ್ಚಿಕೊಳ್ಳಬೇಕು..?

ಕುಂಕುಮವನ್ನು ಮಹಿಳೆಯರು ಯಾವಾಗಲೂ ತಮ್ಮ ಬೈತೆಲೆಯ ಮಧ್ಯದಲ್ಲಿ ಇಟ್ಟುಕೊಳ್ಳಬೇಕು. ಕುಂಕುಮವನ್ನು ಇಟ್ಟುಕೊಂಡ ನಂತರ, ಅದನ್ನು ನಮ್ಮ ತಲೆಕೂದಲಿನಿಂದ ಮರೆಮಾಡಬಾರದು. ಪತಿಯ ದೀರ್ಘಾಯುಷ್ಯಕ್ಕಾಗಿ ವಿವಾಹಿತ ಮಹಿಳೆ ಯಾವಾಗಲೂ ತನ್ನ ಹಣೆಗೆ ಕುಂಕುಮವನ್ನು ಇಟ್ಟುಕೊಳ್ಳಬೇಕು.

ಕುಂಕುಮವನ್ನು ಸುರಕ್ಷಿತವಾಗಿಡುವುದು ಹೇಗೆ..?

ಹಿಂದೂ ಧರ್ಮದ ಪ್ರಕಾರ, ಕುಂಕುಮವನ್ನು ಇಡಬಹುದಾದ ಮರದ ಪೆಟ್ಟಿಗೆಯಲ್ಲಿ ಇಡುವುದು ಅತ್ಯಂತ ಶುಭವೆಂದು ಹೇಳಲಾಗುತ್ತದೆ. ಇದಲ್ಲದೇ ಕುಂಕುಮವನ್ನು ಹಿತ್ತಾಳೆಯ ಪುಟ್ಟ ಪೆಟ್ಟಿಗೆಯಲ್ಲಿಯೂ ಇಡಬಹುದು.

ಕುಂಕುಮವನ್ನು ಎಲ್ಲಿ ಖರೀದಿಸಬೇಕು..?

ಕುಂಕುಮವು ಸೌಭಾಗ್ಯದ ಸಂಕೇತ. ಹಿಂದೂ ಧರ್ಮಗ್ರಂಥಗಳಲ್ಲಿ ಕುಂಕುಮವನ್ನು ಮಾತೃ ದೇವತೆಯ ಆಶೀರ್ವಾದ ಎಂದು ಪರಿಗಣಿಸಲಾಗುತ್ತದೆ. ಈ ಕಾರಣದಿಂದ ದೇವಿಯ ದೇವಸ್ಥಾನದಿಂದ ಕುಂಕುಮವನ್ನು ಖರೀದಿಸಲು ಪ್ರಯತ್ನಿಸಿ. ತಾಯಿ ದೇವಿ ಇರುವ ಯಾವುದೇ ಹತ್ತಿರದ ದೇವಸ್ಥಾನದಿಂದ ಕುಂಕುಮವನ್ನು ಖರೀದಿಸುವುದು ಶುಭ. ಒಂದು ವೇಳೆ ನಿಮಗೆ ದೇವಸ್ಥಾನಕ್ಕೆ ಹೋಗಲು ಸಾಧ್ಯವಾಗದಿದ್ದರೆ, ಮಾರುಕಟ್ಟೆಯಲ್ಲಿ ಸಿಗುವ ಕುಂಕುಮವನ್ನು ಖರೀದಿಸಿ ಮತ್ತು ಮೊದಲು ಅದನ್ನು ದೇವಿಯ ಪಾದದ ಬಳಿ ಇಟ್ಟು ನಂತರ ನೀವು ನಿಮ್ಮ ಹಣೆಗೆ ಇಟ್ಟುಕೊಳ್ಳಬಹುದು.

ಕುಂಕುಮ ಖರೀದಿಸಲು ಶುಭ ದಿನ:

ಕುಂಕುಮವನ್ನು ಖರೀದಿಸಲು ಶುಕ್ರವಾರವನ್ನು ಶುಭ ದಿನವೆಂದು ಪರಿಗಣಿಸಲಾಗುತ್ತದೆ. ಈ ದಿನವನ್ನು ಮಾತೃ ದೇವತೆಯ ದಿನವೆಂದು ಪರಿಗಣಿಸಲಾಗುತ್ತದೆ. ಶುಕ್ರವಾರವೇ ಕುಂಕುಮವನ್ನು ಖರೀದಿಸಲು ಪ್ರಯತ್ನಿಸಿ.

ನಿಮ್ಮ ಕುಂಕುಮವನ್ನು ಯಾರಿಗೂ ಕೊಡಬೇಡಿ:

ನೀವು ಬಳಸಿದ ಅಥವಾ ಬಳಸುತ್ತಿರುವ ಕುಂಕುಮವನ್ನು ನೀವು ಯಾರೊಂದಿಗೂ ಹಂಚಿಕೊಳ್ಳಬಾರದು. ನೀವು ಬಳಸುವ ಕುಂಕುಮವನ್ನು ಪ್ರತ್ಯೇಕವಾಗಿ ಇಟ್ಟುಕೊಳ್ಳಿ ಮತ್ತು ಅದನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ. ಯಾರಿಗಾದರೂ ಕುಂಕುಮ ಬೇಕಾದರೆ ಅದಕ್ಕೆ ಪ್ರತ್ಯೇಕ ಕುಂಕುಮವನ್ನು ಮೊದಲೇ ಇಟ್ಟುಕೊಂಡಿರಬೇಕು.

ಕುಂಕುಮವನ್ನು ದಾನ ಮಾಡುವುದು ಶ್ರೇಯಸ್ಕರ:

ಕುಂಕುಮವನ್ನು ಹಚ್ಚಿಕೊಳ್ಳುವುದು ಹಿಂದೂ ಧರ್ಮದಲ್ಲಿ ಅತ್ಯಂತ ಪವಿತ್ರವಾದ ಕೆಲಸವಾಗಿದೆ. ಹಾಗೆಯೇ ಕುಂಕುಮವನ್ನು ದಾನ ಮಾಡುವುದು ತುಂಬಾ ಮಂಗಳಕರವೆಂದು ಪರಿಗಣಿಸಲಾಗಿದೆ. ಬಡ ವಿವಾಹಿತ ಮಹಿಳೆಗೆ ಕುಂಕುಮವನ್ನು ಯಾವುದೇ ವ್ರತ ಅಥವಾ ಹಬ್ಬದಂದು ಸುಮಂಗಲಿಯರು ಬಳಸುವ ಇನ್ನಿತರ ವಸ್ತುಗಳೊಂದಿಗೆ ದಾನ ಮಾಡುವುದರಿಂದ ಪತಿಗೆ ದೀರ್ಘಾಯುಷ್ಯ ಸಿಗುತ್ತದೆ ಮತ್ತು ಗೌರಿ ಮಾತೆಯ ಕೃಪೆಯೂ ಸಿಗುತ್ತದೆ. ಕುಂಕುಮವನ್ನು ದಾನ ಮಾಡುವ ಮೊದಲು, ಗೌರಿ ದೇವಿಗೆ ಅರ್ಪಿಸಿ ನಂತರ ದಾನ ಮಾಡಬೇಕು.

ವಿವಾಹಿತ ಮಹಿಳೆಯರು ಕುಂಕುಮವನ್ನು ಹಚ್ಚಿಕೊಳ್ಳುವಾಗ ಇರಬಹುದು ಅಥವಾ ಖರೀದಿಸುವಾಗ ಇರಬಹುದು ಅಥವಾ ಅದನ್ನು ಯಾರಿಗಾದರೂ ದಾನ ಮಾಡುವಾಗ ಇರಬಹುದು ಈ ಮೇಲಿನ ವಿಚಾರಗಳನ್ನು ಗಮನದಲ್ಲಿಟ್ಟುಕೊಳ್ಳುವುದು ತುಂಬಾನೇ ಮುಖ್ಯ.

https://www.youtube.com/watch?v=VyGTuRMOmEk&pp=wgIGCgQQAhgB

Related Post

Leave a Comment