ಈ ರೀತಿ ಪೂಜೆ ಮಾಡಿ ನೋಡಿ ಕಣ್ಣಲ್ಲಿ ನೀರು ಬರಲಿಲ್ಲ ಅಂದ್ರೆ ಕೇಳಿ!

ಸರಳ ಸುಲಭವಾಗಿ ಮಾಡುವ ಪೂಜೆಗೆ ಬೇಕಾಗುವ ಕಡ್ಡಾಯವಾಗಿ ಬೇಕಾಗಿರುವ ಪೂಜೆ ಸಾಮಗ್ರಿಗಳು ಯಾವುದು ಎಂದರೆ,ದೇವರ ಚಿತ್ರಗಳು ಅಥವಾ ಸಣ್ಣ ಪೂಜಾ ವಿಗ್ರಹ ಇದ್ದಾರೆ ಒಳ್ಳೆಯದು,ಎರಡು ಪಂಚ ಪಾತ್ರೆ. ಇದರಲ್ಲಿ ಒಂದು ಪಾತ್ರೆಯಲ್ಲಿ ತೀರ್ಥ ಮಾಡಿಕೊಳ್ಳಬೇಕು. ಇದಕ್ಕೆ ನೀರು, ಪಂಚಾ ಕರ್ಪುರ ತುಳಸಿ ದಳ ಹಾಕಿಕೊಂಡು ತಯಾರು ಮಾಡಿಕೊಳ್ಳಬೇಕು.ಇಷ್ಟೆಲ್ಲಾ ಸಿದ್ಧತೆ ಅದ ನಂತರ ಮೊದಲು ಪೂಜೆ ಮಾಡಬೇಕಾಗಿರುವುದು ಗಣೇಶನಿಗೆ.

ಶುಕ್ಲಾಂಬರದರಂ ವಿಷ್ಣುಂ ಶಶಿವರ್ಣಂ ಚತುರ್ಭುಜಂ ಪ್ರಸನ್ನವದನಂ ದ್ಯಯೇ ಸರ್ವ ವಿಘ್ನೋಪಶಾಂತಯೇ||

ಈ ಮಂತ್ರದೊಂದಿಗೆ ಗಣೇಶನನ್ನು ಸ್ತುತಿಸಿ.ನಂತರ ಓಂ ಕೇಶವಯ ಸ್ವಾಹಾ, ಓಂ ನಾರಾಯಣ ಸ್ವಾಹಾ, ಓಂ ಮಲ್ವಯ ಸ್ವಾಹಾ ಎಂದು ಮೂರು ಸಲ ಆಚಾಮಾನ ಮಾಡಿಕೊಂಡು ನಂತರ ಶ್ರೀಮನ್ ನಾರಾಯಣನಾ 24 ಹೆಸರನ್ನು ಪೂರ್ಣಗೊಳಿಸಬೇಕು. ಸ್ತ್ರೀಯರು ಸ್ವಹ ಎಂದು ಬಳಸದೆ ನಮಃ ಎಂದು ಬಳಸಬೇಕು.ನಂತರ ಎಡ ಗಡೆಯಿಂದ ನೀರನ್ನು ಹಾಕಿ.ನಂತರ ಪ್ರಾಣಯಾಮ ಮುದ್ರೆಯನ್ನು ಹಾಕಿಕೊಳ್ಳಿ.ಈ ಸಮಯದಲ್ಲಿ ಗಾಯತ್ರಿ ಮಂತ್ರವನ್ನು ಜಪ ಮಾಡಬೇಕು.

ನಂತರ ನಿಮ್ಮ ಇಷ್ಟ ದೇವರನ್ನು ಸ್ಮರಿಸುತ್ತ ಸಂಕಲ್ಪವನ್ನು ಮಾಡಬೇಕು.ನಂತರ ಶೋಡೋ ಉಪಚಾರವನ್ನು ಮಾಡಬೇಕು.ದೇವರು ನಮ್ಮಲ್ಲಿ ಇದ್ದಾನೆ ಎನ್ನುವ ಭಾವನೆಯಿಂದ ಶೋಡೋಉಪಚಾರವನ್ನು ಮಾಡಬೇಕು.ದೇವರ ಪಾದವನ್ನು ತೊಳೆಯಿರಿ ಹಾಗೂ ದೇವರಿಗೆ ಕುಡಿಯುವುದಕ್ಕೆ ನೀರನ್ನು ಅರ್ಪಿಸಿ.ನಂತರ ಭಗವಂತನಾ ವಿಗ್ರಹಕ್ಕೆ ಅಭಿಷೇಕ ಮಾಡುವ ಸಮಯ.

ನಿಮ್ಮ ಮನೆಯಲ್ಲಿ ಯಾವುದಾದರೂ ಸಣ್ಣ ಮಗುವನ್ನು ಸ್ನಾನ ಮಾಡಿಸುತ್ತಿರಲ್ಲವ ಅಷ್ಟೇ ಮಮಕಾರದಿಂದ ಪ್ರೀತಿಯಿಂದ ದೇವರಿಗೆ ಸ್ನಾನವನ್ನು ಮಾಡಿಸಬೇಕು.ನಂತರ ಹೊಸ ವಸ್ತ್ರವನ್ನು ಕೊಡುವ ಪದ್ಧತಿ.ನಂತರ ಗಂಧ ಅರಿಶಿಣ ಕುಂಕುಮವನ್ನು ಹಚ್ಚಿ.ನಂತರ ಹೂವಿನಿಂದ ಅಲಂಕಾರವನ್ನು ಮಾಡಿ. ದೇವರಿಗೆ ಹೂಗಳನ್ನು ಅರ್ಪಣೆ ಮಾಡುವಾಗ ಹೃದಯದಿಂದ ಹೂಗಳನ್ನು ಸಮರ್ಪಿಸಿ. ನಂತರ ದೂಪಾವನ್ನು ಬೆಳಗಬೇಕು ಮತ್ತು ದೀಪವನ್ನು ಬೆಳಗಿ ನೈವೈದ್ಯವನ್ನು ಇಡಬೇಕು.ನಂತರ ತಾಂಬೂಲ ಸಮರ್ಪಣೆಯನ್ನು ಮಾಡಬೇಕು.ಕೊನೆಯಾ ಉಪಚಾರ ಆರತಿ ಮಾಡುವುದು.

ಇನ್ನು ಮಂತ್ರ ಪುಷ್ಪಾರ್ಚನೆ ಮಾಡಿ ನಮಸ್ಕಾರವನ್ನು ಮಾಡಬೇಕು.ಇಷ್ಟು ಮಾಡಿದ ನಂತರ ನಿಮ್ಮಲ್ಲಿ ಭಗವಂತ ನಿಮ್ಮ ಸುತ್ತ ಇದ್ದಾನೆ ಎನ್ನುವ ಭಾವನೆ ಮೂಡಿರುತ್ತದೆ.ಈ ಸಮಯದಲ್ಲಿ ನಿಮಗೆ ಗೊತ್ತಿಲ್ಲದೇ ಕಣ್ಣೀರು ಬರುತ್ತದೆ.ಕೋನೇಯಲ್ಲಿ ದೇವರಿಗೆ ಗಾಳಿಯನ್ನು ಬೀಸುವ ಸೇವೆ.ಅಂತಿಮವಾಗಿ ಅಭಿಷೇಕ ಮಾಡಿದ ನೀರನ್ನು ಎರಡನೇ ಪಂಚಾ ತೀರ್ಥ ಪಾತ್ರೆಗೆ ಹಾಕಿ ಪೂಜೆಯ ಫಲವಾದ ತೀರ್ಥವನ್ನು ಮನೆ ಮಂದಿಗೆ ಕೊಡಿ.ಇದು ನಿತ್ಯ ಪೂಜೆ ಮಾಡುವ ಕ್ರಮ.

Related Post

Leave a Comment