ಮಧುಮೆಹಿಗಳಿಗೆ ಬೇಯಿಸಿದ ಮೊಟ್ಟೆ ಎಷ್ಟು ಉಪಯುಕ್ತ!

ಮಧುಮೇಹ ಅಥವಾ ಸಕ್ಕರೆ ಕಾಯಿಲೆ ಮನುಷ್ಯನಲ್ಲಿ ಒಮ್ಮೆ ಕಾಣಿಸಿಕೊಂಡರೆ, ಮತ್ತೆ ಆತ ತನ್ನ ಜೀವನ ಪರ್ಯಾಂತ, ಈ ಕಾಯಿಲೆಯೊಂದಿಗೆ ಪರಿಸ್ಥಿತಿ ಎದುರಾಗುತ್ತದೆ. ಯಾವ ರೀತಿಯಲ್ಲಿ ಚಿಕಿತ್ಸೆ ಮಾಡಿದರೂ ಕೂಡ, ಅಷ್ಟು ಸುಲಭವಾಗಿ ಈ ಕಾಯಿಲೆ ಮನುಷ್ಯನನ್ನು ಬಿಟ್ಟು ಹೋಗುವುದಿಲ್ಲ! ಆದರೆ ಇದನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು. ಇದೇ ಒಂದು ಸಮಾಧಾನಕರ ಸಂಗತಿ ಅಷ್ಟೇ.

ಇಂದು ಜನರು ಅನುಸರಿಸುತ್ತಿರುವ ಕೆಟ್ಟ ಜೀವನಶೈಲಿ ಹಾಗೂ ಅನಾರೋಗ್ಯಕಾರಿ ಆಹಾರ ಪದ್ಧತಿಯಿಂದಾಗಿ, ಈ ಕಾಯಿಲೆ ಸುಲಭವಾಗಿ ಜನರನ್ನು ಆವರಿಸಿಕೊಂಡು ಬಿಡುತ್ತಿದೆ. ಅದರಲ್ಲೂ ಇನ್ನೂ ಆತಂಕಕಾರಿ ಸಂಗತಿ ಏನೆಂದರೆ, ವಯಸ್ಸು ಇನ್ನೂ 30 ದಾಟಿರುವುದಿಲ್ಲ, ಅದಾಗಲೇ ಇವರು ಮಧುಮೇಹ ಕಾಯಿಲೆಗೆ ತುಂಬಾ ಹತ್ತಿರವಾಗಿ ಬಿಡುತ್ತಾರೆ! ಇನ್ನೂ ಕೆಲವರಿಗೆ ಹುಟ್ಟುತ್ತಲೆ ಮಧುಮೇಹ ಸಮಸ್ಯೆ ಅನುವಂಶೀಯವಾಗಿ ಬಂದು ಬಿಡುತ್ತದೆ.

ಸಕ್ಕರೆ ಕಾಯಿಲೆಯ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಆಹಾರಪದ್ಧತಿ

ಸಕ್ಕರೆ ಕಾಯಿಲೆ ಒಂದು ರೀತಿಯಲ್ಲಿ ಹೇಳುವುದಾದರೆ, ಸೈಲೆಂಟ್ ಕಿಲ್ಲರ್ ಇದ್ದ ಹಾಗೆ! ಈ ಕಾಯಿಲೆ ಹೇಗೆ ಎನ್ನುವುದು ಅನುಭವಿಸುವವರಿಗೆ ಮಾತ್ರ ಗೊತ್ತು. ಒಮ್ಮೆ ಈ ಕಾಯಿಲೆ ಕಾಣಿಸಿಕೊಂಡರೆ, ಮನುಷ್ಯನ ಜೀವನಶೈಲಿಗೆ ಸಂಪೂರ್ಣವಾಗಿ ಬದಲಾಗಿ ಹೋಗುತ್ತದೆ. ಆಹಾರ ಪದ್ಧತಿ ಕೂಡ ಅಷ್ಟೇ.

ಇಷ್ಟಪಟ್ಟ ಆಹಾರಗಳನ್ನು ತಿನ್ನುವ ಹಾಗಿಲ್ಲ. ಎಲ್ಲದಕ್ಕಿಂತ ಮುಖ್ಯವಾಗಿ ಸಿಹಿ ಅಂಶ ಹೆಚ್ಚಿರುವ ಆಹಾರಗಳಿಂದ ಸಂಪೂರ್ಣವಾಗಿ ದೂರ ಇರಬೇಕಾಗುತ್ತದೆ. ಆಗ ಮಾತ್ರ ಈ ಕಾಯಿಲೆಯನ್ನು ತಕ್ಕ ಮಟ್ಟಿಗಾದರೂ ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ಸಹಾಯವಾಗುತ್ತದೆ.

ಈ ಬಗ್ಗೆ ಸಂಶೋಧನೆ ಏನು ಹೇಳುತ್ತದೆ?

ಸಂಶೋಧನೆಯಲ್ಲಿ ಸರಿಯಾಗಿ ಅಧ್ಯಾಯನ ಮಾಡಿದ ಬಳಿಕ ತಜ್ಞರು ಹೇಳುವ ಪ್ರಕಾರ, ಸಕ್ಕರೆ ಕಾಯಿಲೆ ಅಥವಾ ಮಧುಮೇಹ ಕಾಯಿಲೆ ಇರುವವರು, ಆದಷ್ಟು ತಮ್ಮ ಆಹಾರಕ್ರಮದಲ್ಲಿ ಕಡಿಮೆ ಕಾರ್ಬೋ ಹೈಡ್ರೇಟ್ ಅಂಶಗಳು ಮತ್ತು ಹೆಚ್ಚಿನ ಪ್ರಮಾಣದ ಒಳ್ಳೆಯ ಕೊಬ್ಬಿನಾಂಶ ಒಳಗೊಂಡ ಆಹಾರಗಳನ್ನು ಸೇವನೆ ಮಾಡಬೇಕು.ಇದರಿಂದ ರಕ್ತದಲ್ಲಿ ಸಕ್ಕರೆ ಅಂಶ ಏರಿಕೆ ಆಗದೆ, ಮಧುಮೇಹ ಕಾಯಿಲೆ ನಿಯಂತ್ರಣ ದಲ್ಲಿ ಇರಲು ನೆರವಾಗುತ್ತದೆ, ಎಂದು ಅಭಿಪ್ರಾಯ ಪಡುತ್ತಾರೆ. ಅಲ್ಲದೆ ಇದಕ್ಕೊಂದು ಒಳ್ಳೆಯ ಉದಾಹರಣೆಯಾಗಿ, ಪ್ರತಿದಿನ ಮುಂಜಾನೆ ಬೇಯಿಸಿದ ಮೊಟ್ಟೆಯನ್ನು ಸೇವಿಸಬೇಕೆಂದು ಕೂಡ ಸೂಚಿಸಿದ್ದಾರೆ..!

ಸಂಶೋಧಕರು ಇದನ್ನು ಹೇಗೆ ಸಾಬೀತು ಪಡಿಸಿದರು?

ಸಂಶೋಧಕರು ಯಾವುದೇ ವಿಷ್ಯದ ಬಗ್ಗೆ ಹೇಳಿಕೆ ನೀಡಿದರೂ ಕೂಡ, ಅದಕ್ಕೆ ಬೇಕಾದ ಎಲ್ಲಾ ದಾಖಲೆ ಗಳನ್ನು ಕೂಡ ನೀಡುತ್ತಾರೆ. ಅಲ್ಲದೆ ಸರಿಯಾಗಿ ಸಂಶೋಧನೆಗಳನ್ನು ನಡೆಸಿ, ಕೊನೆಗೆ ಒಂದು ತೀರ್ಮಾ ನಕ್ಕೆ ಬರುತ್ತಾರೆ.ಯಾಕೆಂದರೆ ಆಹಾರಪದ್ಧತಿಯ ವಿಚಾರದಲ್ಲಿ ಕೊಡುವ ಹೇಳಿಕೆಗಳು ಸಾಬೀತಾಗಿದ್ದರೆ ಮಾತ್ರ ಅದು ಅರ್ಹವಾಗುತ್ತವೆ. ಹೀಗಾಗಿ ಮಧುಮೇಹ ರೋಗಿಗಳ ಆರೋಗ್ಯದ ಮೇಲೆ ಮೊಟ್ಟೆ ಹೇಗೆ ಪರಿಣಾಮ ಬೀರುತ್ತದೆ ಎನ್ನುವುದನ್ನು ಪತ್ತೆಹಚ್ಚಲು, ಕೆಲವು ಜನರನ್ನು ತಮ್ಮ ಅಧ್ಯಯನಕ್ಕೆ ಬಳಸಿ ಕೊಳ್ಳುತ್ತಾರೆ.

ಈ ಸಂಶೋಧನೆಯಲ್ಲಿ ಸಕ್ಕರೆ ಕಾಯಿಲೆ ಇರುವ ಒಂದಿಷ್ಟು ಜನರಿಗೆ ಬೆಳಗಿನ ತಿಂಡಿಯ ಸಮಯಕ್ಕೆ ಬೇಯಿಸಿದ ಮೊಟ್ಟೆ ಕೊಟ್ಟರು, ಇನ್ನು ಕೆಲವರಿಗೆ ಕೆಲವು ಹಣ್ಣುಗಳನ್ನು ಸೇವಿಸಲು ಕೊಟ್ಟರು.ಅಷ್ಟೇ ಅಲ್ಲದೆ, ಇವರ ಮಧ್ಯಾಹ್ನದ ಹಾಗೂ ರಾತ್ರಿಯ ಊಟಕ್ಕೂ ಕೂಡ ಅಷ್ಟೇ, ಒಂದೇ ಬಗೆಯ ಆಹಾರಗಳನ್ನು ನೀಡಿದರು. ಹಾಗೂ ಪ್ರತಿದಿನ ಇವರ ಆರೋಗ್ಯದಲ್ಲಿ ಆಗುವ ಏರುಪೇರಿನ ಬಗ್ಗೆ ಗ್ಲೂಕೋಸ್ ಮಾನಿಟರ್ ಮೂಲಕ ಪರೀಕ್ಷೆ ಮಾಡುತ್ತಾ ಬಂದರು…

ಅಂತಿಮವಾಗಿ ಕಂಡು ಕೊಂಡ ಸತ್ಯಾಂಶ ಏನೆಂದರೆ…

ಅಂತಿಮವಾಗಿ ಇಲ್ಲಿ ಕಂಡುಕೊಂಡ ಸತ್ಯಾಂಶ ಏನೆಂದರೆ, ಕಡಿಮೆ ಕಾರ್ಬೋ ಹೈಡ್ರೇಟ್ ಮತ್ತು ಹೆಚ್ಚು ಕೊಬ್ಬಿನಾಂಶ ಹೊಂದಿದ ಬೇಯಿಸಿದ ಮೊಟ್ಟೆಯನ್ನು ಪ್ರತಿದಿನ ಸೇವನೆ ಮಾಡಿದವರಲ್ಲಿ, ರಕ್ತದಲ್ಲಿ ಸಕ್ಕರೆ ಅಂಶ ಕಡಿಮೆ ಕಂಡುಬಂದಿತು ಅಲ್ಲದೇ, ಮಧುಮೇಹದ ಲಕ್ಷಣಗಳು ದಿನಾ ಹೋದ ಹಾಗೆ ನಿಯಂತ್ರಣಕ್ಕೆ ಬರುತ್ತಿರುವುದು ಕಂಡು ಬಂದಿತ್ತು.

ಹಾಗಾದ್ರೆ ಸಕ್ಕರೆಕಾಯಿಲೆ ಇರುವವರು ಬೇಯಿಸಿದ ಮೊಟ್ಟೆ ಹೇಗೆ ತಿನ್ನಬೇಕು?

ಸಕ್ಕರೆಕಾಯಿಲೆ ಇದ್ದವರು ಹಾಗೂ ಇಲ್ಲದವರು, ಪ್ರತಿದಿನ ದಿನಕ್ಕೊಂದು ಬೇಯಿಸಿದ ಮೊಟ್ಟೆಯ ಜೊತೆಗೆ ಬೆಳಗಿನ ಬ್ರೇಕ್ ಫಾ‌ಸ್ಟ್‌ಗೆ ಪ್ರತಿದಿನ ಕಡಿಮೆ ಕಾರ್ಬೋಹೈಡ್ರೇಟ್ ಅಂಶಗಳನ್ನು ಹಾಗೂ ಒಳ್ಳೆಯ ಕೊಬ್ಬಿನಾಂಶ ಇರುವ ಆಹಾರಗಳನ್ನು ತಿನ್ನುವ ಅಭ್ಯಾಸ ಮಾಡಿಕೊಂಡರೆ ಆರೋಗ್ಯ ವೃದ್ಧಿ ಆಗುವುದು ಮಾತ್ರವಲ್ಲದೆ, ರಕ್ತದಲ್ಲಿ ಸಕ್ಕರೆ ಅಂಶ ನಿಯಂತ್ರಣಕ್ಕೆ ಬಂದು, ಸಕ್ಕರೆಕಾಯಿಲೆ ಅಪಾಯ ಕೂಡ ದೂರವಾಗುವುದು.

Related Post

Leave a Comment