ಈ ಪ್ರಾಣಿಗಳು ಮನೆಯೊಳಗೆ ಬಂದರೆ ಸಾಕ್ಷಾತ್ ಲಕ್ಷ್ಮೀ ಬಂದಂತೆಯೇ!ಶುಭ ಶಕುನ ಅನಿರೀಕ್ಷಿತವಾಗಿ ಅದೃಷ್ಟ ಲಭಿಸುತ್ತದೆ!

ಮನೆಗೆ ಯಾವಾಗಲೂ ಕೆಲವು ಕೀಟಗಳು, ಜಂತುಗಳು ಅಥವಾ ಪಕ್ಷಿಗಳು ಬರುತ್ತಲೇ ಇರುತ್ತದೆ ಆದರೆ ಕೆಲವು ಕೀಟ ,ಜಂತುಗಳು ಮನೆಗೆ ಬಂದಾಗ ಒಳ್ಳೆಯದು ಆಗುತ್ತದೆ ಇನ್ನು ಕೆಲವು ಬಂದರೆ ಕೆಟ್ಟದ್ದು ಕೂಡ ಆಗುತ್ತದೆ ಅಂತ ಶಾಸ್ತ್ರ ಹೇಳುತ್ತದೆ.

ಪಾರಿವಾಳ:ಪಾರಿವಾಳಗಳು ಮನೆಯಲ್ಲಿ ಗೂಡು ಕಟ್ಟಿದರೆ ಅದು ಅಶುಭದ ಸೂಚನೆಯಾಗಿರುತ್ತದೆ. ಮನೆಯಲ್ಲಿ ಆರ್ಥಿಕ ನಷ್ಟ , ಕಷ್ಟ ನಷ್ಟಗಳೂ ಉಂಟಾಗುತ್ತವೆಯಂತೆ ಹಾಗಾಗಿ ಪಾರಿವಾಳಗಳನ್ನು ಮನೆಯಲ್ಲಿ ಗೂಡು ಕಟ್ಟದಂತೆ ನೋಡಿಕೊಳ್ಳಿ.ಗಿಳಿ:ಗಿಳಿ ತನ್ನಿಂದ ತಾನೇ ಮನೆಯೊಳಗೆ ಪ್ರವೇಶ ಮಾಡಿದರೆ ಅದು ಅದೃಷ್ಟವನ್ನು ಹೊತ್ತು ತಂದಿರುತ್ತದೆ ಇದರಿಂದ ಮನೆಯಲ್ಲಿ ಶುಭಕಾರ್ಯಗಳು ನೆರವೇರಲಿದೆ.

ಮನೆಯಲ್ಲಿ ಜೇಡ ಏನಾದರೂ ಗೂಡನ್ನು ಪದೆ ಪದೆ ಕಟ್ಟುತ್ತಿದ್ದರೆ ಅದು ಮನೆಗೆ ಕಷ್ಟಗಳು ಹೆಚ್ಚಾಗುವ ಸಂಕೇತವಾಗಿದೆ.
ಸಾಲ ಹೆಚ್ಚಾಗಿ ಹಣಕಾಸಿನ ಸಮಸ್ಯೆಗಳು ಇದ್ದಕ್ಕಿದ್ದಂತೆ ಉದ್ಭವ ಆಗುತ್ತದೆಆದ್ದರಿಂದ ಮನೆಯಲ್ಲಿ ಜೇಡ ಗೂಡು ಕಟ್ಟದಂತೆ ನೋಡಿಕೊಳ್ಳಿ.ಆಗಾಗ ಮನೆಯನ್ನು ಕ್ಲೀನ್ ಮಾಡಿ..ಯಾಕೆಂದರೆ ಜೇಡಕ್ಕೆ ನಕಾರಾತ್ಮಕ ಶಕ್ತಿಗಳನ್ನು ಸೆಳೆಯುವಂತಹ ಶಕ್ತಿ ಇರುತ್ತದೆ ಆದ್ದರಿಂದ ಮನೆಯಲ್ಲಿ ಜೇಡಗಳು ಹೆಚ್ಚು ಇರದಂತೆ ನೀವು ನೋಡಿಕೊಳ್ಳುವುದು ಸೂಕ್ತ.

ಸಾಮಾನ್ಯವಾಗಿ ಮನೆಗೆ ಹಾವು ಬಂದರೆ ಹೆದರುತ್ತೇವೆ ಅಥವಾ ಕೋಲಿನಿಂದ ಹೊಡೆಯುತ್ತೇವೆಆದರೆ ಹಾವು ಮನೆಗೆ ಬರುವುದು ಒಳಿತೋ ಕೆಡುಕೋ ಎನ್ನುವುದನ್ನು ನೋಡುವುದಾದರೆಹಾವುಗಳು ಬರುವುದು ನಿಮ್ಮ ಮನೆಗೆ ಕೆಟ್ಟದ್ದನ್ನು ಸೂಚಿಸುತ್ತದೆ ಆದಾಗ್ಯೂ ನಿಮ್ಮ ಮನೆಯ ದೇವರು ನಾಗದೇವತೆಗಳಾಗಿ ಗಿದ್ದರೆ ನಿಮಗೆ ಯಾವುದೋ ಜೀವನದ ಮುಖ್ಯವಾದ ವಿಷಯ ಸೂಚಿಸಲು ಬಂದಿರುತ್ತದೆ.ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ಇರವೆಗಳು ಬಂದೇ ಬರುತ್ತವೆ.ನಾವೆಲ್ಲರೂ ತಿಳಿದುಕೊಂಡಿರುವುದು ಕಪ್ಪು ಇರುವೆ ಒಳ್ಳೆಯದು ಮತ್ತು ಕೆಂಪು ಇರುವೆ ಕೆಟ್ಟದ್ದು ಎಂದು ಆದರೆ ಶಾಸ್ತ್ರಗಳ ಪ್ರಕಾರ ಇರುವೆ ಯಾವುದೇ ಆಗಲಿ ಮನೆಯಲ್ಲಿ ಬಂದರೆ ಅದು ಶುಭ ಪ್ರದಾಯಕ ವಾಗಿರುತ್ತದೆ. ಕಪ್ಪು ಇರುವೆ ಹಣಕಾಸಿನ ಸಮಸ್ಯೆ ಸುಧಾರಿಸುತ್ತದೆ.ಮನೆಗೆ ಸದ್ಯದಲ್ಲೇ ಮಹಾಲಕ್ಷ್ಮಿ ಬರುತ್ತಾಳೆಂದು ಇದು ಸೂಚಿಸುತ್ತದೆ.ನಾಭಿವೃದ್ಧಿ ಆಗುತ್ತದೆ ಎಂದು ಇದು ಸೂಚಿಸುತ್ತದೆ.

ಬಾವುಲಿ:ಬಾಬ ಬಾವುಲಿಗಳು ಯಾವುದೇ ಕಾರಣಕ್ಕೂ ಮನೆಯ ಒಳಗೆ ಪ್ರವೇಶ ಮಾಡದಂತೆ ನೋಡಿಕೊಳ್ಳಿ.ಬಾವಲಿಗಳು ನಕಾರಾತ್ಮಕ ಶಕ್ತಿಯನ್ನು ಹೆಚ್ಚು ಪ್ರತಿಬಿಂಬಿಸುತ್ತದೆ ಹಾಗೂ ಇದರಿಂದ ಅನಾರೋಗ್ಯ ,ಹಣಕಾಸಿನ ಸಮಸ್ಯೆ ಹೀಗೆ ಇನ್ನಿತರ ಸಮಸ್ಯೆಗಳು ನಿಮಗೆ ಎದುರಾಗಬಹುದು.

ಜರಿ:ಸಾಮಾನ್ಯವಾಗಿ ಜರಿ ಅಥವಾ ಸಾವಿರ ಕಾಲು ಬಂದರೆ ಭಯ ಪಡುತ್ತೇವೆ ಯಾಕೆಂದರೆ ಇದು ವಿಷ ಜಂತು ಎಂದು ನಮಗೆ ಭಯವಾಗುತ್ತದೆ.ಮನೆಯಲ್ಲಿ ಜರಿ ಅಥವಾ ಸಾವಿರ ಕಾಲು ಬಂದರೆ ಮಹಾಲಕ್ಷ್ಮಿಯು ಸದ್ಯದಲ್ಲೇ ನಿಮ್ಮ ಮನೆಗೆ ಬರುತ್ತಿದ್ದಾಳೆ ಎಂದು ಅದು ಸೂಚನೆ ನೀಡುತ್ತದೆ.ಹಾಗೂ ಇನ್ನು ಸದ್ಯದಲ್ಲೇ ನೀವು ನಿಮ್ಮ ಮನೆಯಲ್ಲಿ ಒಳ್ಳೆಯ ಸುದ್ದಿಯನ್ನು ಕೇಳಲಿದ್ದೀರಿ ಎಂದರ್ಥವಾಗಿದೆ.

ಇನ್ನು ಒಂದು ವೇಳೆ ಸಾವಿರ ಕಾಲು ಅಥವಾ ಜರಿ ನಿಮ್ಮ ಮನೆಯಲ್ಲಿ ಕಂಡರೆ ತಕ್ಷಣ ಅದರ ಮೇಲೆ ಅರಿಶಿನ ಮತ್ತು ಕುಂಕುಮವನ್ನು ಸ್ವಲ್ಪ ಉದುರಿಸಿ ಕೈಮುಗಿದು ನಿಮ್ಮ ಇಷ್ಟಾರ್ಥಗಳನ್ನು ಬೇಡಿಕೊಳ್ಳಿ ಇದರಿಂದ ನಿಮ್ಮ ಮನೆಯ ಅನೇಕ ಸಂಕಷ್ಟಗಳು ದೂರವಾಗಲಿದೆ.

ಧನ್ಯವಾದಗಳು.

Related Post

Leave a Comment