3 ಮಹಿಳೆಯರು ಮರೆತರು ಶ್ರಾವಣ ಸೋಮವಾರದ ವ್ರತ ಮಾಡಬೇಡಿ, ಶಿವನ ಕೋಪಕ್ಕೆ ಕಾರಣ ಆಗುವಿರಿ!

ಭಗವಂತನಾದ ಈಶ್ವರನು ಯಾರ ಮೇಲೆ ಪ್ರಸನ್ನರಾಗಿರುತ್ತಾರೋ ಅಂತವರನ್ನು ತಮ್ಮ ಶರಣದಲ್ಲಿ ತೆಗೆದುಕೊಂಡು ಅವರ ಎಲ್ಲಾ ಕಷ್ಟ ದುಃಖಗಳನ್ನು ದೂರ ಮಾಡುತ್ತಾರೆ. ನಂತರ ಜಗತ್ತಿನಲ್ಲಿ ಇರುವಂತಹ ಎಲ್ಲಾ ಸುಖ-ಶಾಂತಿಗಳನ್ನು ಅವರಿಗೆ ನೀಡುತ್ತಾರೆ. ಆದರೆ ಯಾರ ಮೇಲೆ ಇವರು ಕೋಪ ಮಾಡಿಕೊಳ್ಳುತ್ತಾರೊ ಅವರನ್ನು ಇವರು ಶಾಶ್ವತವಾಗಿ ತಮ್ಮಿಂದ ದೂರ ಮಾಡುತ್ತಾರೆ.

ಶ್ರಾವಣ ಮಾಸ ಭಗವಂತನಾದ ಈಶ್ವರನಿಗೆ ತುಂಬಾನೇ ಪ್ರಿಯವಾದ ತಿಂಗಳು ಆಗಿದೆ. ಈ ಕಾರಣದಿಂದ ಶ್ರಾವಣ ತಿಂಗಳಲ್ಲಿ ಭಕ್ತರ ಉತ್ಸಾಹ ಹೆಚ್ಚಾಗಿರುತ್ತದೆ. ಮನೆ ಮಂದಿರದಿಂದ ಬರುವಂತಹ ಮಂತ್ರಗಳಿಂದ ಇಡೀ ವಾತಾವರಣ ಪವಿತ್ರವಾದ ಶಕ್ತಿಗಳಿಂದ ತುಂಬಿಕೊಳ್ಳುತ್ತದೆ. ಶ್ರಾವಣ ತಿಂಗಳಲ್ಲಿ ವಿಧಿವಿಧಾನಗಳಿಂದ ಭಕ್ತರು ದೇವರನ್ನು ಪೂಜೆ ಮಾಡುತ್ತಾರೆ. ಈಶ್ವರನು ತಮ್ಮ ಪ್ರತಿಯೊಬ್ಬರ ಭಕ್ತರ ಮೇಲೆ ಕೃಪಾದೃಷ್ಟಿಯನ್ನು ಹಾಕಿರುತ್ತಾರೆ. ಆದರೆ ಕೆಲವರಿಗೆ ಬೇಕು ಎಂದರೂ ಸಿಗುವುದಿಲ್ಲ.ಈ 3 ವಸ್ತುಗಳನ್ನು ಮರೆತರು ಸಹ ಶಿವನಿಗೆ ಅರ್ಪಿಸಬಾರದು.

1, ತುಳಸಿ ಎಲೆ–ಭಗವಂತನಾದ ಶಿವನ ಪೂಜೆಯಲ್ಲಿ ತುಳಸಿಯನ್ನು ಬಳಸಬಾರದು. ತುಳಸಿ ತಾಯಿ ಲಕ್ಷ್ಮಿ ದೇವಿಯ ರೂಪ ಆಗಿರುತ್ತದೆ. ಇವರು ವಿಷ್ಣುವಿನ ಹೆಂಡತಿ ಕೂಡ ಆದ್ದರಿಂದ ಶಿವನ ಪೂಜೆಯಲ್ಲಿ ತುಳಸಿಯನ್ನು ಬಳಸಲಾಗುವುದಿಲ್ಲ.

2, ಶಂಖ–ಭಗವಂತನಾದ ಶಿವನ ಪೂಜೆಯಲ್ಲಿ ಶಂಖದ ಪ್ರಯೋಗ ಮಾಡಬಾರದು. ಭಗವಂತನಾದ ಶಿವನು ಶಂಖ ಚುಡಾ ಎಂಬ ಹೆಸರಿನ ರಾಕ್ಷಸನನ್ನು ವದೆ ಮಾಡಿದ್ದರು.ಅದೇ ಶಂಖ ಚುಡಾನ ಎಲುಬಿನಿಂದ ಈ ಶಂಖ ಸೃಷ್ಟಿ ಆಗಿತ್ತು.ಒಂದು ವೇಳೆ ಶಂಖದಿಂದ ಜಲವನ್ನು ಅರ್ಪಿಸಿದರೆ ಶಿವನ ಕೋಪಕ್ಕೆ ತುತ್ತಾಗುತ್ತಿರ.

3, ಕೇದಾಗಿ ಹೂವು
ಶಾಸ್ತ್ರಗಳ ಕಥೆಯ ಅನುಸಾರವಾಗಿ ಒಂದು ಬಾರಿ ಬ್ರಹ್ಮದೇವರು ವಿಷ್ಣು ದೇವರ ನಡುವೆ ಒಂದು ವಿವಾದ ನಡೆದಿತ್ತು.ಇಲ್ಲಿ ಕೇದಿಗೆ ಹೂವು ಬ್ರಹ್ಮದೇವರ ಸಾಕ್ಷಿ ಕೂಡ ಆಗಿತ್ತು.ಭಗವಂತನಾದ ಶಿವನು ನಿರ್ಣಯ ರೂಪದಲ್ಲಿ ನಿಂತಿದ್ದರು.ಕೇದಿಗೆ ಹೂವಿನ ಸುಳಿವು ಗೊತ್ತಾಗಿ ಬಿಡುತ್ತದೆ. ಆಗ ಅವರು ಕೇದಿಗೆ ಹೂವಿಗೆ ಶಾಪವನ್ನು ನೀಡುತ್ತಾರೆ ಶಿವನಿಗೆ ಬಿಳಿ ಹೂವು ಅಂದರೆ ಇಷ್ಟ ಆಗುತ್ತದೆ. ಆದರೂ ಸಹ ಶಿವನ ಪೂಜೆಯಲ್ಲಿ ಕೇದಿಗೆ ಹೂವಿನ ಬಳಕೆ ಮಾಡೋದಿಲ್ಲ.ಇವುಗಳನ್ನು ಶಿವನ ಪೂಜೆಯಲ್ಲಿ ಬಳಸಬಾರದು.

ಶಿವನು ತುಂಬಾ ಸರಳ ಮತ್ತು ಶಾಂತ ಸ್ವಭಾವದವರೂ ಆಗಿರುತ್ತಾರೆ. ಶಿವನ ಆರಾಧನೆ ಮಾಡಬೇಕು ಎಂದರೆ ಶಿವನ ರೀತಿಯೇ ಆಗ ಬೇಕಾಗಿರುತ್ತದೆ. ಯಾರು ಶಿವನ ರೀತಿ ಆಗಲು ಸಾಧ್ಯವಾಗುವುದಿಲ್ಲವೋ ಅವರು ಶಿವನ ಕೃಪೆಯಿಂದ ದೂರ ಇರುತ್ತಾರೆ.ಶ್ರಾವಣ ಮಾಸದ ವ್ರತವನ್ನು ಯಾವ ರೀತಿಯ ಜನರು ಮಾಡಬಾರದು ಎಂದರೆ,

1, ಶಿವನ ಸ್ವಭಾವವು ಸಹಜವಾಗಿ ಸರಳವಾಗಿ ಮತ್ತು ಕಪಟರಹಿತ ಆಗಿರುತ್ತದೆ.ಹಾಗಾಗಿ ಯಾರು ದುಷ್ಟರು, ಕಪಟರು ಆಗಿರುತ್ತಾರೋ ಅಂತವರ ಮೇಲೆ ಶಿವನ ಕೃಪೆ ಇರುವುದಿಲ್ಲ. ಇವರು ಎಷ್ಟೇ ಪೂಜೆ ಮಾಡಿದರು ಇವರಿಗೆ ಶಿವನ ಕೃಪೆ ಸಿಗುವುದಿಲ್ಲ.

2, ಶಿವನು ಶಾಂತ ಮತ್ತು ಧೀರ ಗಂಭೀರ ಪ್ರರಾದ್ದಿಯನ್ನು ಹೊಂದಿರುತ್ತಾನೆ.ಆಗ ಯಾರು ಯಾವುದೇ ಕಾರಣವಿಲ್ಲದೆ ಸತತವಾಗಿ ಜಗಳವನ್ನು ಆಡುತ್ತಾರೋ, ಯಾರು ವಾದ ವಿವಾದಗಳನ್ನು ಮಾಡುತ್ತಾರೋ ಅಂತವರ ಮೇಲೆ ಶಿವನ ಕೃಪೆ ಬೀಳುವುದಿಲ್ಲ. ಒಂದು ವೇಳೆ ಇಂಥವರು ಶ್ರಾವಣ ಮಾಸದಲ್ಲಿ ಸೋಮವಾರದಂದು ವ್ರತವನ್ನು ಮಾಡಿದರೆ ಅವರಿಗೆ ವ್ರತದ ಫಲ ಸಿಗುವುದಿಲ್ಲ.

3, ಶಿವನು ಮೋಹಮಾಯ ಆಗಲಿ ದುರಾಸೆಯಿಂದ ದೂರ ಇರುತ್ತಾರೆ.ಹಾಗಾಗಿ ಯಾರು ದುರಾಸೆಯನ್ನು ಪಡುತ್ತಾರೋ, ಯಾರು ಬೇರೆ ಅವರ ವಸ್ತು ಮೇಲೆ ದುರಾಸೆ ಪಡುತ್ತಾರೋ ಅಂಥವರಿಗೆ ಶಿವನ ಆಶೀರ್ವಾದ ಸಿಗುವುದಿಲ್ಲ.

4, ಶಿವನು ಅರ್ಧನರೇಶ್ವರ ಆಗಿದ್ದರೆ. ಯಾರು ಸ್ತ್ರೀಯರಿಗೆ ಅವಮಾನ ಮಾಡುತ್ತಾರೋ, ಯಾರು ಪರಸ್ತ್ರೀಯರನ್ನು ಕೆಟ್ಟದಾಗಿ ನೋಡುತ್ತಾರೊ, ಯಾರು ಕೆಟ್ಟದಾಗಿ ಮಾತನಾಡುತ್ತಾರೆ ಇಂತವರು ಶಿವಭಕ್ತರು ಆಗಲು ಸಾಧ್ಯವಿಲ್ಲ. ಇಂಥವರು ಏನೇ ಮಾಡಿದರು ಶಿವನ ಕೃಪೆ ಸಿಗುವುದಿಲ್ಲ.

5, ಸುಳ್ಳು ಹೇಳುವ ಸ್ತ್ರೀಯರು.ಇಂತವರು ವ್ರತ ಮಾಡಿದರೆ ಫಲ ಸಿಗುವುದಿಲ್ಲ.

6, ಭಗವಂತನಾದ ಶಿವನು ಯಾವತ್ತಿಗೂ ಪಾರ್ವತಿ ದೇವಿಯ ಮೇಲೆ ತನ್ನ ಸ್ನೇಹ, ಗೌರವವನ್ನು ನೀಡುತ್ತಾರೆ.
ಪಾರ್ವತಿ ಮಾತೆಯನ್ನು ಪತಿವ್ರತೆ ದೇವಿ ಎಂದು ತಿಳಿಯಲಾಗಿದೆ.ಅದರಿಂದ ಯಾವ ಸ್ತ್ರೀ ಗಂಡನ ಮೇಲೆ ಪ್ರೀತಿ ಇಡುವುದಿಲ್ಲವೋ ಪರ ಪುರುಷರೊಂದಿಗೆ ಸಂಬಂಧ ಮಾಡುತ್ತಾರೋ ಇಂತವರ ಮೇಲೆ ಶಿವನು ಕೋಪ ಮಾಡಿಕೊಳ್ಳುತ್ತಾರೆ. ಇವರು ಎಷ್ಟೇ ಪೂಜೆ ಮಾಡಿದರೂ ಸಹ ಶಿವನ ಕೃಪೆಯಿಂದ ವಂಚಿತರಾಗುತ್ತಾರೆ.

Related Post

Leave a Comment