ಗುಪ್ತ ಆಂಜನೇಯ ಸ್ವಾಮಿಯ ಮಂತ್ರ ಕೇವಲ ಕೇಳಿದರೂ ನಿಮ್ಮ ಕಷ್ಟಗಳೆಲ್ಲ ದೂರ ಆಗುತ್ತದ!

ಆಂಜನೇಯ ಸ್ವಾಮಿ ಪೂಜೆ ಎಲ್ಲದಕ್ಕಿಂತ ಪ್ರಭಾವಶಾಲಿ ಎಂದು ತಿಳಿಯಲಾಗಿದೆ. ಇವರ ಪೂಜೆಗೂ ಮುನ್ನ ಎಲ್ಲಕ್ಕಿಂತ ಮೊದಲು ಫಲ ಸಿಗುತ್ತದೆ.ಏಕೆಂದರೆ ಕಲಿಯುಗದಲ್ಲಿ ಆಂಜನೇಯ ಸ್ವಾಮಿಯನ್ನು ಜಾಗೃತ ದೇವರ ರೂಪದಲ್ಲಿ ಪೂಜಿಸಲಾಗುತ್ತದೆ. ಕಲಿಯುಗದ ಅಂತ್ಯದವರೆಗೂ ಆಂಜನೇಯ ಜಾಗ್ರತೆ ವ್ಯವಸ್ಥೆಯಲ್ಲಿ ಭೂಮಿಯ ಮೇಲೆ ಇಂದಿಗೂ ಎಲ್ಲಾರ ನಡುವೆ ಇದ್ದರೆ. ಶ್ರೀ ಭಗವಂತರಾದ ಶ್ರೀರಾಮರು ಆಂಜನೇಯ ಸ್ವಾಮಿಗೆ ಒಂದು ವರವನ್ನು ಕೊಟ್ಟಿದ್ದರೆ ಈ ವರದ ಅನುಸಾರವಾಗಿ ಕಲಿಯುಗದಲ್ಲಿ ಇವರು ಜಿರಂಜೀವಿಯಾಗಿ ಭೂಮಿಯ ಮೇಲೆ ಅಮರರಾಗಿದ್ದು ಭಕ್ತರ ಕಲ್ಯಾಣವನ್ನು ಇವರು ಮಾಡಲಿ ಎನ್ನುವ ಉದ್ದೇಶವಾಗಿದ್ದು. ಇಲ್ಲಿ ಆಂಜನೇಯ ಸ್ವಾಮಿ ಭಕ್ತರ ದುಃಖಗಳನ್ನು ದೂರ ಮಾಡುತ್ತಾರೆ.

ಕಲಿಯುಗದಲ್ಲಿ ನೀವು ಆಂಜನೇಯ ಸ್ವಾಮಿ ಪೂಜೆ ಮಾಡಿದರೆ ನಿಮಗೆ ಬೇಗನೇ ಅದರ ಪ್ರಭಾವ ಕಾಣುತ್ತದೆ. ಆಂಜನೇಯ ಸ್ವಾಮಿಯ ಪೂಜೆಯಿಂದ ಸಾಕ್ಷಾತ್ ಮೃತ್ಯು ಕೂಡ ಗಡಗಡ ನಡುಗುತ್ತದೆ. ಹಾಗಾಗಿ ಈ ಒಂದು ಮಂತ್ರ ನಿಮ್ಮ ರೋಗ ಹಾಗು ಇನ್ನು ಯಾವುದೇ ಸಮಸ್ಸೆ ಇದ್ದರು ಕೂಡ ತಕ್ಷಣವೆ ದೂರ ಮಾಡುತ್ತವೆ. ಯಾವಾಗ ನೀವು ಈ ಒಂದು ಮಂತ್ರವನ್ನು ಜಪ ಮಾಡುತ್ತಿರೋ ಇದು ನಿಮ್ಮ ಸುತ್ತಮುತ್ತ ಸೂಕ್ಷ್ಮವಾದ ಹಾಗು ದಿವ್ಯವಾದ ಶಕ್ತಿಯ ಕುಂಡವನ್ನು ರಚನೆ ಮಾಡುತ್ತದೇ. ಇದೆ ಶಕ್ತಿಯ ಕಾರಣದಿಂದಾಗಿ ಇಲ್ಲಿ ಅದೆಲ್ಲ ಎಷ್ಟೇ ನೆಗೆಟಿವ್ ಶಕ್ತಿ ಇದ್ದರು ಕೂಡ ನಾಶ ಆಗುತ್ತದೆ. ತಾಯಂದಿರು ಮಕ್ಕಳ ಸುರಕ್ಷಿತಕ್ಕೆ ಖಂಡಿತ ಜಪ ಮಾಡಬೇಕು.

ಇನ್ನು ನಿಮ್ಮ ಇಂಟರ್ವ್ಯೂ ಹಾಗು ಬಿಸಿನೆಸ್ ನಲ್ಲಿ ಯಶಸ್ಸು ಗಳಿಸಲು ಮುಂಜಾನೆ ಮೂರು ಬಾರಿ ಈ ಮಂತ್ರವನ್ನು ಓದಿರಿ. ನಂತರ ನಿಮ್ಮ ಯಾವುದೇ ಕೆಲಸ ಕಾರ್ಯಗಳನ್ನು ಪ್ರಾರಂಭಿಸಿರಿ.

ಈ ಒಂದು ಮಂತ್ರವನ್ನು ಮುಂಜಾನೆ ಬ್ರಹ್ಮ ಮುಹೂರ್ತ ಸಮಯದಲ್ಲಿ ಜಪ ಮಾಡಬೇಕು. ಈ ಸಮಯದಲ್ಲಿ ಮಾಡಿದ ಪೂಜಾ ಪಾಠಗಳಿಗೆ ತುಂಬಾನೇ ಯಶಸ್ಸು ಸಿಗುತ್ತದೆ. ಹಾಗಾಗಿ ಈ ಸಮಯದಲ್ಲಿ ನೀವು ಈ ಮಂತ್ರಗಳನ್ನು ಜಪ ಮಾಡಬೇಕು.ನೀವು ಬ್ರಹ್ಮ ಮುಹೂರ್ತದಲ್ಲಿ ಎದ್ದು ಸ್ನಾನಗಳನ್ನು ಮಾಡಿಕೊಂಡು ಅಂದರೆ ಮುಂಜಾನೆ 4:00 ಗಂಟೆಯಿಂದ 6:00 ಗಂಟೆ ಒಳಗಿನ ಸಮಯವನ್ನು ಬ್ರಹ್ಮ ಮುಹೂರ್ತ ಎಂದು ಕರೆಯುತ್ತಾರೆ. ಈ ಸಮಯದ ಮಧ್ಯ ಈ ಮಂತ್ರವನ್ನು ಜಪ ಮಾಡಬೇಕು.

ಈ ಮಂತ್ರ ಜಪ ಮಾಡುವಾಗ ಸೂರ್ಯ ಉದಯ ಆಗುವ ದಿಕ್ಕಿನ ಕಡೆ ಕುಳಿತುಕೊಂಡು ನಿಮ್ಮ ಎರಡು ಆಗೈಯನ್ನು ಜೋಡಿಸಿ ನಿಮ್ಮ ಮನಸ್ಸಿನಲ್ಲಿ ಆಂಜನೇಯ ಸ್ವಾಮಿಯನ್ನು ನೆನೆಯಬೇಕು. ಈಗ ನೀವು ಈ ಮಂತ್ರವನ್ನು ನೀವು ಜಪ ಮಾಡಬೇಕು. ಈ ಮಂತ್ರವನ್ನು ಕೇವಲ ಮೂರು ಬಾರಿ ಹೇಳಬೇಕು.

ಓಂ ನಮೋ ಹನುಮತೆ ರುದ್ರಾವತಾರಯ ವಿಶ್ವರೂಪಯ ಅಮಿತ್ ವಿಕ್ರಮಾಯ ಪ್ರಕಟ ಪರಾಕ್ರಮಯ ಮಹಾಬಲಯ ಸೂರ್ಯ ಕೋಟಿ ಸಮಪ್ರಭಾಯ ರಾಮಧೂತಯ ಸ್ವಾಹ…!!

ಈ ಮಂತ್ರವನ್ನು ಮೂರು ಬಾರಿ ಜಪ ಮಾಡಿದ ನಂತರ ನಿಮ್ಮಲ್ಲಿ ಏನಾದರು ಮನಸ್ಸಿಚ್ಚೆಗಳು ಇದ್ದರೆ ಅವುಗಳನ್ನು ಆಂಜನೇಯ ಸ್ವಾಮಿ ಬಳಿ ಹೇಳಿಕೊಳ್ಳಿರಿ. ನಂತರ ನಿಮ್ಮ ಕೈಗಳನ್ನು ಜೋಡಿಸಿ ಕಣ್ಣುಗಳನ್ನು ತೆರೆಯಬಹುದು. ನಂತರ ನಿಮ್ಮ ಕಾರ್ಯವನ್ನು ನೀವು ಆರಂಭಿಸಿರಿ. ನೀವು ಪ್ರತಿದಿನ ಈ ರೀತಿ ಮಾಡಿದರೆ ಖಂಡಿತವಾಗಿ ನಿಮಗೆ ಯಶಸ್ಸು ಸಿಗುತ್ತದೆ. ವಿಶೇಷವಾಗಿ ಮಂಗಳವಾರ ಶನಿವಾರ ಈ ಮಂತ್ರ ಜಪ ಮಾಡುವುದನ್ನು ಬಿಡಬೇಡಿ.

Related Post

Leave a Comment