ಶ್ರಾವಣ ಮಾಸದಲ್ಲಿ ದೇವಸ್ಥಾನ ಮತ್ತು ಮನೆಯಲ್ಲಿ ಪೂಜೆ ಪುನಸ್ಕಾರ ಹೆಚ್ಚಾಗಿ ಇರುತ್ತದೆ. ಹಾಗಾಗಿ ಶ್ರಾವಣ ಮಾಸವನ್ನು ಪವಿತ್ರವಾದ ಮಾಸ ಎಂದು ಹೇಳಬಹುದು.ಇನ್ನು ಸೋಮವಾರ ಮಂಗಳವಾರ ಮತ್ತು ಶನಿವಾರ ದಿನ ತುಂಬಾನೇ ವಿಶೇಷವಾಗಿ ಪೂಜೆ ಇರುತ್ತದೆ.
ಈ ಸಮಯದಲ್ಲಿ ಹಲವಾರು ವ್ರತಗಳನ್ನು ಸಹ ಮಾಡುತ್ತಾರೆ. ಇನ್ನು ಶ್ರಾವಣ ಸೋಮವಾರ ಶಿವನಿಗೆ ಹಾಲಿನ ಅಭಿಷೇಕ ಮಾಡುತ್ತಾರೆ. ಇನ್ನು ಪ್ರತಿಯೊಬ್ಬರೂ ಪ್ರತಿದಿನ ಮೃತ್ಯುಂಜಯ ಮಂತ್ರವನ್ನು ಪಟನೆ ಮಾಡಿದರೆ ಒಳ್ಳೆಯದು.
ಇನ್ನು ಶ್ರಾವಣ ಮಾಸದ ಸಮಯದಲ್ಲಿ 21 ಬಾರಿ ಓಂ ನಮಃ ಶಿವಾಯ ಎಂದು ಹೇಳುತ್ತಾ ಬಿಲ್ವ ಪತ್ರೆಯನ್ನು ಅರ್ಪಿಸಿದರೆ ಸಾಕು ನಿಮ್ಮ ಎಲ್ಲಾ ರೀತಿಯ ಆರ್ಥಿಕ ಸಮಸ್ಸೆ ಕೂಡ ನಿವಾರಣೆ ಆಗುತ್ತದೆ. ಇನ್ನು ಶಿವನಿಗೆ ರುದ್ರಾಭಿಷೇಕ ಮಾಡುವುದರಿಂದ ಮಂಗಳ ದೋಷ ಕೂಡ ನೀವರಣೆ ಆಗುತ್ತದೆ.
ಇನ್ನು ಶ್ರಾವಣ ಮಾಸದಲ್ಲಿ ಗೊಮೂತ್ರವನ್ನು ಸಿಂಪಡಿಸಿದರೆ ಬಹಳ ಒಳ್ಳೆಯದು. ಈ ರೀತಿ ಮಾಡಿದರೆ ನಿಮ್ಮ ಮನೆಯಲ್ಲಿ ಇರುವ ನೆಗೆಟಿವ್ ಎನರ್ಜಿ ಕೂಡ ಹೋಗಲಾಡಿಸುತ್ತದೆ.