ಮನೆ ಮುಂದೆ ಕಾಗೆಗಳು ಕೂಗಿದರೆ ಅಶುಭನಾ?

ಹಿಂದೂ ಸಂಪ್ರದಾಯದ ಪ್ರಕಾರ ಬಂಧುಗಳು ಸತ್ತ ಮೇಲೆ ಕಾಗೆಗಳಿಗೆ ಪಿಂಡ ಇಡುತ್ತೀವಿ.ಮುರುದಿಂದ ಹತ್ತನೇ ದಿನವರೆಗೆ ಕಾಗೆಗಳಿಗೆ ಆಹಾರವನ್ನು ಇಡುವುದು ತಿಳಿದೇ ಇದೆ. ಮೃತಪಟ್ಟವರು ಕಾಗೆಯ ರೂಪದಲ್ಲಿ ಆಹಾರ ತಿನ್ನಲು ಬರುತ್ತಾರೆ ಎನ್ನುವ ನಂಬಿಕೆ ಹಿಂದಿನ ಕಾಲದಿಂದಲೂ ನಡೆದು ಬಂದಿದೆ.ಈ ಕಾರಣದಿಂದ ದೊಡ್ಡವರು ಅಥವಾ ಕುಟುಂಬಸ್ಥರು ಮೃತ ಪಟ್ಟರೆ ಪಿಂಡ ಇಡುವುದು ಆಚಾರವಾಗಿ ನಡೆದುಕೊಂಡು ಬಂದಿದೆ.

ಈ ಕಾರ್ಯದ ಭಾಗವಾಗಿ ಕಾಗೆಗಳಿಗೆ ಆಹಾರವನ್ನು ನೀಡುತ್ತೇವೆ. ಆ ಆಹಾರವನ್ನು ಕಾಗೆ ತಿಂದರೆ ದೊಡ್ಡವರು ತೃಪ್ತಿ ಪಟ್ಟಿದ್ದಾರೆ ಅಂತ ಒಂದು ವೇಳೆ ಕಾಗೆ ಮುಟ್ಟದೆ ಇದ್ದರೆ ಅವರಿಗೆ ಇಷ್ಟವಾಗದ ಕೋರಿಕೆ ಅವರಿಗೆ ಇನ್ನೂ ತೀರಿಲ್ಲ ತೃಪ್ತಿ ಆಗಿಲ್ಲ ಎಂದು ಅಂದುಕೊಳ್ಳುತ್ತಿವಿ. ಆದರೆ ಪುರಾಣಗಳಲ್ಲಿ ರಾವಣ ನವಗ್ರಹಗಳನ್ನು ಬಂಧಿಸಲು ಬಂದಾಗ ಯಮಧರ್ಮರಾಜ ಭಯಭಿತನಗುತ್ತಾನೆ.ನವಗ್ರಹ ಬಂಧಿಸುತ್ತಾನೆ ಎಂದು ಬೇರೆ ದಾರಿ ಇಲ್ಲದೆ ಅಲ್ಲಿ ಇದ್ದ ಒಂದು ಕಾಗೆಯನ್ನು ನೋಡಿ ಓಡಿ ಹೋಗುವ ಒಂದು ಮಾರ್ಗ ಇದ್ದರೆ ಹೇಳು ಎಂದು ಕೇಳುತ್ತಾನೆ.

ಅದಕ್ಕೆ ಕಾಗೆ ನನ್ನ ಒಳಗೆ ಬಂದು ನೀನು ಪ್ರವೇಶಿಸು ಅಂತ ಹೇಳುತ್ತೆ.ಪ್ರವೇಶಿಸಿದ ನಂತರ ಕಾಗೆ ರಾವಣನಿಂದ ಯಮಧರ್ಮರಾಜರನ್ನು ಕಾಪಾಡುತ್ತದೆ. ಆಗ ಯಮಧರ್ಮರಾಜ ಕಾಗೆಗೆ ಒಂದು ವರವನ್ನು ನೀಡುತ್ತಾನೆ. ನಿನಗೆ ಯಾರಾದರೂ ಅಮಾವಾಸ್ಯೆ ದಿನ ಅಥವಾ ಬಂಧುಗಳು ಸತ್ತ ದಿನ ಆಹಾರವನ್ನು ಇಡುತ್ತಾರೋ ಆ ಆಹಾರವನ್ನು ನೀನು ತಿಂದರೆ ಪಿತೃಗಳು ನರಕದಲ್ಲಿ ಸಹ ಸಂತೋಷವಾಗಿ ಇರುತ್ತಾರೆ ಎನ್ನುವ ಒಂದು ವರವನ್ನು ನೀಡುತ್ತಾನೆ. ಅದರಿಂದ ಕಾಗೆಗೆ ಆಹಾರ ನೀಡುವುದು ಆಚಾರವಾಗಿ ನಡೆದುಕೊಂಡು ಬಂದಿದೆ.

ಯಾವುದಾದರು ರಥಗಳನ್ನು ಮಾಡಿದಾಗ ತಿನ್ನದಿದ್ದರೂ ಮೂಕ ಪ್ರಾಣಿಗಳಿಗೆ ಆಹಾರವನ್ನಾಗಿ ಇಡುತ್ತೇವೆ.ಕಾಗೆ ಶನಿ ದೇವರ ಅನುಗ್ರಹ ಪಡೆದಿದೆ. ಕಾಗೆಗೆ ಆಹಾರ ಇಟ್ಟರೆ ಶನಿ ದೇವರ ಅನುಗ್ರಹವನ್ನು ನೀವು ಪಡೆಯಬಹುದು.ಇನ್ನು ಕೆಲವು ಕಥೆಗಳ ಪ್ರಕಾರ ಕಾಗೆ ಕೆಲವು ಸೂಚನೆಗಳನ್ನು ನೀಡುತ್ತದೆ ಎಂದು ಹೇಳುತ್ತಾರೆ.ಪೂರ್ವಿಕರು ಮನುಷ್ಯರ ಜೀವನ ಮತ್ತು ಮರಣ ಕಾಗೆಯಿಂದ ನಂಟು ಹೊಂದಿದೆ ಎಂದು ಹೇಳುತ್ತಾರೆ.ಸತ್ತು ಹೋದ ಪೂರ್ವಿಕರು ಕಾಗೆ ರೂಪದಲ್ಲಿ ಇರುತ್ತರೆ ಅಂತ ತುಂಬಾ ಜನರ ನಂಬಿಕೆ.

ತಿಥಿಗಳ ಸಮಯದಲ್ಲಿ ಕಾಗೆ ಪಿಂಡವನ್ನು ತಿಂದರೆ ಸತ್ತವರ ಆತ್ಮ ತೃಪ್ತಿ ಪಟ್ಟಿದೆ ಅಂತ ನಂಬುತ್ತಾರೆ.ಕಾಗೆಗಳು ಭವಿಷ್ಯವನ್ನು ತಿಳಿಸುತ್ತೆ ಎಂದು ಕೆಲವರು ಹೇಳುತ್ತಾರೆ.ಮನೆಯ ಮೇಲೆ ಕಾಗೆ ಕೂಗಿದರು,
ಕೆಲವು ಜಾಗದಲ್ಲಿ ಕೂತರು,ಕಾಗೆ ಮುಟ್ಟಿದರು ಅವು ಮುಂದೆ ನಡೆಯುವ ಒಂದು ಘಟನೆಗಳಿಗೆ ಸೂಚನೆ ಕೊಡುತ್ತವೆ ಎಂದು ಹೇಳುತ್ತಾರೆ.

ಒಂದು ವೇಳೆ ನೀವು ಮನೆಯಿಂದ ಹೊರಗೆ ಹೋಗುವಾಗ ಕಾಗೆ ಬಂದು ಜೋರಾಗಿ ಕೂಗಿ ಹೋದರೆ ನೀವು ಹೋಗುತ್ತಿರುವ ಕೆಲಸ ನಿಮ್ಮ ಪ್ರಯಾಣ ಸಕ್ಸಸ್ ಆಗುತ್ತೆ ಎನ್ನುವ ಸಂಕೇತ ಆಗಿರುತ್ತದೆ.ನೀರು ತುಂಬಿದ ವಸ್ತುವಿನ ಮೇಲೆ ಕಾಗೆ ಕುಳಿತಿರುವುದನ್ನು ನೀವು ನೋಡಿದರೆ ನೀವು ಸ್ವಲ್ಪ ದಿನದಲ್ಲಿ ಶ್ರೀಮಂತರಾಗುತ್ತೀರಿ ಎನ್ನುವ ಸೂಚನೆ ಆಗಿದೆ.ಒಂದು ವೇಳೆ ಕಾಗೆ ಯಾವುದೊ ಒಂದು ತನ್ನ ಆಹಾರವನ್ನು ಕಚ್ಚಿಕೊಂಡು ಹೋಗುವುದನ್ನು ನೀವು ನೋಡಿದರೆ ನಿಮಗೆ ಯಾವುದೊ ಒಂದು ಶುಭವಾರ್ತೆ ಕೇಳುತ್ತೆ ಎಂದು ಅರ್ಥ.

ಊರಿಗೆ ಹೋಗುವಾಗ, ಆಫೀಸ್ ಗೆ ಹೋಗುವಾಗ ಕಾಗೆ ಕೂಗಿದರೆ ಅದು ಅಶುಭ ವಾರ್ತೆ ಕೇಳುತ್ತೀರಾ ಎಂದು ಅರ್ಥ.ಒಂದು ವ್ಯಕ್ತಿಯ ಮೇಲೆ ಕಾಗೆ ಮುಟ್ಟಿ ಹೋದರೆ ಅವರು ಅವಮಾನದಿಂದ ಸಮಾಜದಲ್ಲಿ ಗೌರವವನ್ನು ಕಳೆದುಕೊಲ್ಲುತ್ತರೆ ಎಂದು ಅರ್ಥ.ಒಂದು ವೇಳೆ ಕಾಗೆ ಮಹಿಳೆಯಾರ ತಲೆ ಮೇಲೆ ಅಥವಾ ಆಕೆಯ ಮೈ ಮೇಲೆ ಕುಳಿತರೆ ಅವರ ಗಂಡ ಸಮಸ್ಸೆಯಲ್ಲಿ ಸಿಲುಕಿಕೊಳ್ಳುತ್ತಾನೆ ಎಂದು ಅರ್ಥ.ಇದು ಹಿಂದಿನ ಕಾಲದಿಂದಲೂ ನಂಬಿಕೊಂಡು ಬಂದ ಕೆಲವು ಸೂಚನೆಗಳು.

Related Post

Leave a Comment