ಕಡಲೆಕಾಳು ಸಕ್ಕರೆ ಕಾಯಿಲೆಗೆ ಎಷ್ಟು ಪವರ್ ಫುಲ್ ಗೊತ್ತಾ!

ಅಡುಗೆಮನೆಯಲ್ಲಿ ಬಗೆಬಗೆಯ ಅಡುಗೆ ಸಾಮಗ್ರಿಗಳು, ಮಸಾಲೆ ಪದಾರ್ಥಗಳು, ಕಾಳುಕಡಿ ಎಲ್ಲವೂ ಇರುತ್ತವೆ. ನಮ್ಮ ದೇಹದ ಆರೋಗ್ಯಕ್ಕೆ ಒಂದೊಂದು ಬಗೆಯ ಆಹಾರ ಪದಾರ್ಥಗಳಿಂದ ಒಂದೊಂದು ರೀತಿಯ ಪ್ರಯೋಜನಗಳು ಸಿಗುತ್ತವೆ. ಆದರೆ ಒಂದೇ ಬಗೆಯ ಪೌಷ್ಟಿಕಾಂಶಗಳನ್ನು ಎಲ್ಲಾ ಆಹಾರ ಪದಾರ್ಥಗಳಲ್ಲಿ ನೋಡಲು ಸಾಧ್ಯವಿಲ್ಲ. ಅದೇ ರೀತಿ ಎಲ್ಲಾ ಆಹಾರ ಪದಾರ್ಥಗಳು ಕೇವಲ ಒಂದೇ ಬಗೆಯ ಪ್ರಯೋಜನಗಳಿಗೆ ಸೀಮಿತವಾಗಿಲ್ಲ.

ಹೀಗಿರಬೇಕಾದರೆ ನಮ್ಮ ದೇಹದಲ್ಲಿ ಯಾವ ಪೌಷ್ಟಿಕ ಸತ್ವಗಳು ಕಡಿಮೆಯಾಗಿದೆ ಅಥವಾ ಪೌಷ್ಟಿಕಾಂಶಗಳ ಕೊರತೆ ಇದೆ ಎಂಬುದನ್ನು ಮೊದಲು ತಿಳಿದುಕೊಂಡು ಅದಕ್ಕೆ ಸಂಬಂಧಪಟ್ಟಂತೆ ಇರುವ ಆಹಾರ ಪದಾರ್ಥಗಳನ್ನು ಸೇವನೆ ಮಾಡಲು ಮುಂದಾಗಬೇಕು. ಇದಕ್ಕಾಗಿ ಮೊದಲು ರಕ್ತ ಪರೀಕ್ಷೆ ಮಾಡಿಸಿಕೊಂಡು ವೈದ್ಯರ ಸಲಹೆ ಪಡೆದುಕೊಂಡು ಮುಂದುವರೆಯುವುದು ಒಳ್ಳೆಯದು.

ಒಂದು ವೇಳೆ ವೈದ್ಯರು ಅಥವಾ ದೈಹಿಕಸ್ವಾಸ್ಥ್ಯ ತಜ್ಞರು ನಿಮ್ಮ ದೇಹಕ್ಕೆ ಕಬ್ಬಿಣದ ಅಂಶದ ಕೊರತೆ ಅಥವಾ ಪ್ರೋಟೀನ್ ಅಂಶದ ಕೊರತೆ ಇರುವ ಕಾರಣ ಸರಿಯಾದ ದೈಹಿಕ ಸದೃಢತೆ ನಿಮಗೆ ಗೊತ್ತಿಲ್ಲ ಮತ್ತು ಇದೇ ಕಾರಣದಿಂದ ಆಗಾಗ ಆಯಾಸದಿಂದ ಬಳಲುತ್ತೀರಿ ಎಂದು ಮಾಹಿತಿ ಕೊಟ್ಟರೆ, ತಕ್ಷಣವೇ ನೀವು ಕಪ್ಪು ಬಣ್ಣದ ಕಡಲೆಕಾಳು ಸೇವನೆ ಮಾಡಲು ಮುಂದಾಗಬಹುದು.ಕಪ್ಪು ಕಡಲೆಕಾಳು ಸೇವನೆಯಿಂದ ಸಿಗುವ ಆರೋಗ್ಯ ಪ್ರಯೋಜನಗಳು

​ಹೆಚ್ಚಿನ ನಾರಿನ ಅಂಶ ಇದರಲ್ಲಿದೆ-ನೀವು ಒಂದು ವೇಳೆ ನಿಮ್ಮ ದೇಹದ ಗ್ಲೈಸೆಮಿಕ್ ಸೂಚ್ಯಂಕವನ್ನು ಅಂದರೆ ಮಧುಮೇಹವನ್ನು ಸರಿಯಾಗಿ ನಿಯಂತ್ರಣ ಮಾಡಿಕೊಳ್ಳಬೇಕು, ನಿಮ್ಮ ದೇಹದ ಜೀರ್ಣ ಶಕ್ತಿ ಹೆಚ್ಚಿಸಿಕೊಳ್ಳಬೇಕು ಎಂದು ಅಂದುಕೊಂಡರೆ, ನಾರಿನ ಅಂಶ ಹೆಚ್ಚಾಗಿರುವ ಕಪ್ಪು ಕಡಲೆಕಾಳು ಸೇವನೆಗೆ ಮುಂದಾಗಬಹುದು.

ಏಕೆಂದರೆ ಇದರಲ್ಲಿ ಕರಗುವ ನಾರಿನ ಅಂಶ ಹೆಚ್ಚಾಗಿರುವುದರಿಂದ, ನಿಮ್ಮ ದೇಹದ ಭಾರತದಲ್ಲಿ ಕಂಡುಬರುವ ಕೆಟ್ಟ ಕೊಲೆಸ್ಟ್ರಾಲ್ ಅಂಶವನ್ನು ಕಡಿಮೆ ಮಾಡಬಲ್ಲದು. ಜೊತೆಗೆ ದೇಹದಲ್ಲಿ ಅಗತ್ಯವಾಗಿ ಬೇಕಾದ ಒಳ್ಳೆಯ ಪ್ರಮಾಣದ ಉತ್ತಮ ಕೊಲೆಸ್ಟ್ರಾಲ್ ಅಂಶವನ್ನು ನಿರ್ವಹಣೆ ಮಾಡಬಲ್ಲದು.

ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು

ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

​ಕಾರ್ಬೋಹೈಡ್ರೇಟ್ ಬೇಗನೆ ಜೀರ್ಣವಾಗುತ್ತದೆ-ಕಪ್ಪು ಕಡಲೆ ಕಾಳುಗಳಲ್ಲಿ ಕಂಡು ಬರುವ ಕಾರ್ಬೋಹೈಡ್ರೆಟ್ ಅಂಶ ನಿಮ್ಮ ದೇಹದಲ್ಲಿ ಬಹಳ ಬೇಗನೆ ಜೀರ್ಣವಾಗುವುದರಿಂದ ನಿಮ್ಮ ರಕ್ತದಲ್ಲಿನ ಸಕ್ಕರೆ ಪ್ರಮಾಣ ಅಚ್ಚುಕಟ್ಟಾಗಿ ನಿರ್ವಹಣೆ ಆಗಬಲ್ಲದು. ಇದರಿಂದ ನಿಮ್ಮ ಇನ್ಸುಲಿನ್ ಪ್ರತಿರೋಧ ಕೂಡ ನಿವಾರಣೆಯಾಗಿ ನೀವು ಮಧುಮೇಹ ಹೊಂದುವ ಸಾಧ್ಯತೆ ಕಡಿಮೆ ಇರುತ್ತದೆ.

ಇದರಲ್ಲಿ ಕಬ್ಬಿಣದ ಅಂಶ ಹೇರಳವಾಗಿದೆ-ಕಪ್ಪು ಕಡಲೆ ಕಾಳು ನಿಮ್ಮ ಅನಿಮಿಯ ಸಮಸ್ಯೆಯನ್ನು ದೂರ ಮಾಡುವ ಶಕ್ತಿ ಪಡೆದಿದೆ. ವಿಶೇಷವಾಗಿ ಗರ್ಭಿಣಿ ಮಹಿಳೆಯರಿಗೆ ಹಾಗೂ ಬಾಣಂತಿ ಮಹಿಳೆಯರಿಗೆ ದೇಹದಲ್ಲಿ ಅಗತ್ಯವಾಗಿ ಇರಬೇಕಾದ ಕಬ್ಬಿಣದ ಅಂಶದ ಮಟ್ಟವನ್ನು ಕಾಯ್ದುಕೊಳ್ಳಲು  ಕಪ್ಪು ಕಡಲೆಕಾಳು ನೆರವಾಗುತ್ತದೆ.

ಗರ್ಭಿಣಿ ಮಹಿಳೆಯರ ದೇಹದಲ್ಲಿ ಹಿಮೋಗ್ಲೋಬಿನ್ ಅಂಶದ ಮಟ್ಟ ಹೆಚ್ಚಿನ ಪಾತ್ರವಹಿಸುತ್ತದೆ. ಇದು ಶ್ವಾಸಕೋಶದಿಂದ ದೇಹದ ಎಲ್ಲಾ ಭಾಗಗಳಿಗೆ ಆಮ್ಲಜನಕವನ್ನು ಪೂರೈಕೆ ಮಾಡಲು ನೆರವಾಗುತ್ತದೆ. ಪ್ರತಿಯೊಂದು ಜೀವಕೋಶ ಕೂಡ ಸಮರ್ಪಕವಾದ ಅಮ್ಲಜನಕವನ್ನು ಪಡೆದುಕೊಳ್ಳುವುದರಿಂದ ದೇಹ ಸದೃಢತೆಯಿಂದ ಕೂಡಿರುತ್ತದೆ.

​ಸಸ್ಯಹಾರಿಗಳಿಗೆ ಪ್ರೋಟೀನ್ ಅಂಶದ ಕೊರತೆ ಇರುವುದಿಲ್ಲ-ಕಪ್ಪು ಕಡಲೆ ಕಾಳು ಸೇವನೆ ಮಾಡುವ ಅಭ್ಯಾಸ ಇಟ್ಟುಕೊಂಡರೆ ಯಾವುದೇ ಸಸ್ಯಹಾರಿ ಜನರಿಗೆ ದೇಹಕ್ಕೆ ಅಗತ್ಯವಾಗಿ ಬೇಕಾದ ಪ್ರಮಾಣದಲ್ಲಿ ಪ್ರೊಟೀನ್ ಅಂಶ ಸಿಗಲಿದೆ. ಹೀಗಾಗಿ ದೇಹದ ಮಾಂಸಖಂಡಗಳ ಸದೃಢತೆಯನ್ನು ಇದು ನಿರ್ವಹಣೆ ಮಾಡುವುದು.

​ಜೀರ್ಣಾಂಗದ ಅವ್ಯವಸ್ಥೆಯನ್ನು ಸರಿ ಮಾಡಬಲ್ಲದು-ಕಪ್ಪು ಕಡಲೆ ಕಾಳುಗಳಲ್ಲಿ ಕಂಡುಬರುವ ನಾರಿನ ಅಂಶ, ನಿಮ್ಮ ದೇಹದ ಮಲಬದ್ಧತೆ ಸಮಸ್ಸೆಯನ್ನು ಸರಿಪಡಿಸುತ್ತದೆ. ಮುಖ್ಯವಾಗಿ ನಿಮ್ಮ ಕರುಳಿನ ಭಾಗದ ಸ್ವಚ್ಛತೆಯನ್ನು ಕಾಯ್ದುಕೊಳ್ಳುವುದರ ಜೊತೆಗೆ ಅತ್ಯುತ್ತಮವಾದ ಜೀರ್ಣಾಂಗ ವ್ಯವಸ್ಥೆಯನ್ನು ಪಡೆಯಲು ಅನುಕೂಲ ಮಾಡಿಕೊಡುತ್ತದೆ.ಇದಕ್ಕಾಗಿ ಕಡಲೆಕಾಳುಗಳನ್ನು ರಾತ್ರಿಯ ಸಮಯದಲ್ಲಿ ನೆನೆಹಾಕಿ ಬೆಳಗಿನ ಸಮಯದಲ್ಲಿ ಅದಕ್ಕೆ ಸ್ವಲ್ಪ ಶುಂಠಿ ಪುಡಿ ಮತ್ತು ಜೀರಿಗೆ ಪುಡಿ ಮಿಶ್ರಣ ಮಾಡಿ ನೀರಿನ ಜೊತೆ ಸೇವನೆ ಮಾಡುವ ಅಭ್ಯಾಸ ಮಾಡಿಕೊಳ್ಳಬೇಕು.

​ಚರ್ಮದ ಆರೋಗ್ಯಕ್ಕೆ ಸಹಕಾರಿ-ಕೇವಲ ನಿಮ್ಮ ದೇಹದ ಒಳಭಾಗದ ಅಂಗಾಂಗಗಳನ್ನು ಮಾತ್ರವಲ್ಲದೆ, ನಿಮ್ಮ ದೇಹದ ಚರ್ಮದ ಆರೋಗ್ಯವನ್ನು ಕೂಡ ಇದು ರಕ್ಷಣೆ ಮಾಡುವ ಗುಣವನ್ನು ಪಡೆದುಕೊಂಡಿದೆ.ನಿರಂತರವಾಗಿ ಆಗಾಗ ನಿಯಮಿತವಾದ ಪ್ರಮಾಣದಲ್ಲಿ ಕಪ್ಪು ಕಡಲೆಕಾಳು ಸೇವನೆ ಮಾಡುತ್ತಾ ಬಂದರೆ ನಿಮ್ಮ ದೇಹದ ಚರ್ಮದ ಮೇಲೆ ಫ್ರೀ ರಾಡಿಕಲ್ ಅಂಶಗಳ ಹಾವಳಿ ತಪ್ಪುತ್ತದೆ. ಇದು ನಿಮ್ಮ ಚರ್ಮದ ಸುಕ್ಕು ಮತ್ತು ಗೆರೆಗಳಿಗೆ ಶಾಶ್ವತ ಮುಕ್ತಿ ಕೊಡುತ್ತದೆ. ಕಪ್ಪು ಕಡಲೆಕಾಳುಗಳಲ್ಲಿ ಕಂಡುಬರುವ ವಿಟಮಿನ್ ಬಿ ಅಂಶ ಇದಕ್ಕೆ ಪ್ರಮುಖ ಕಾರಣ ಎಂದು ಹೇಳಬಹುದು.

​ಇದನ್ನು ಫೇಸ್ ಪ್ಯಾಕ್ ಆಗಿ ಕೂಡ ಬಳಕೆ ಮಾಡಬಹುದು-ನೆನೆಹಾಕಿದ ಕಡಲೆಕಾಳು ಪೇಸ್ಟ್ ಮತ್ತು ಅರಿಶಿನ ಪುಡಿ ಮಿಶ್ರಣ ಮಾಡಿ ಮುಖದ ಮೇಲೆ ಹಚ್ಚಿಕೊಂಡು ಫೇಸ್ ಪ್ಯಾಕ್ ರೂಪದಲ್ಲಿ ಕೂಡ ಬಳಕೆ ಮಾಡಬಹುದು.ಬೆಳಗಿನ ಸಮಯದಲ್ಲಿ ಇದನ್ನು ಹಚ್ಚಿಕೊಂಡು ಸುಮಾರು ಹದಿನೈದು ನಿಮಿಷಗಳು ಹಾಗೆ ಬಿಟ್ಟು ಆನಂತರ ಮುಖವನ್ನು ತೊಳೆದುಕೊಳ್ಳುವುದರಿಂದ ಮುಖದ ಮೇಲಿನ ಕಪ್ಪು ಕಲೆಗಳು ಮಾಯವಾಗಿ ಸುಂದರವಾದ ಹೊಳಪಿನ ಮುಖ ನಿಮ್ಮದಾಗುತ್ತದೆ.

​ತಲೆ ಕೂದಲು ಉದುರುವಿಕೆ ಸಮಸ್ಯೆ ನಿವಾರಣೆಯಾಗುತ್ತದೆ-ಕಡಲೆಕಾಳುಗಳಲ್ಲಿ ಮ್ಯಾಂಗನೀಸ್ ಅಂಶದ ಪ್ರಮಾಣ ಹೆಚ್ಚಾಗಿ ಕಂಡು ಬರುವುದರಿಂದ ಮತ್ತು ನಿಮ್ಮ ದೇಹದಲ್ಲಿ ಒಂದು ವೇಳೆ ಮ್ಯಾಂಗನೀಸ್ ಅಂಶದ ಕೊರತೆಯಿಂದ ತಲೆ ಕೂದಲು ಉದುರುತ್ತಿದ್ದರೆ, ನೀವು ಕಡಲೆಕಾಳು ಸೇವನೆಯನ್ನು ಅಭ್ಯಾಸ ಮಾಡಿಕೊಂಡು ಈ ಸಮಸ್ಯೆಯನ್ನು ಕಡಿಮೆ ಮಾಡಿಕೊಳ್ಳಬಹುದು.ಇದರಲ್ಲಿ ಪ್ರೊಟೀನ್ ಅಂಶ ಕೂಡ ಹೆಚ್ಚಾಗಿರುವುದರಿಂದ ತಲೆಕೂದಲಿನ ಬೇರುಗಳಿಗೆ ಅಗತ್ಯವಾಗಿ ಬೇಕಾದ ಸಾಕಷ್ಟು ಬಗೆಯ ಪೌಷ್ಟಿಕ ಸತ್ವಗಳು ಕಡಲೆಕಾಳುಗಳಲ್ಲಿ ಸಿಗಲಿವೆ.

Related Post

Leave a Comment