ಗೋಮೂತ್ರದ ಉಪಯೋಗ ತಿಳಿದರೆ ಶಾಕ್!

ನಮ್ಮ ಭಾರತ ದೇಶದಲ್ಲಿ ಹಸುವಿಗೆ ವಿಶೇಷ ಸ್ಥಾನಮಾನ ನೀಡಲಾಗಿದೆ. ಕಾಮಧೇನು ಎನ್ನುವ ಇನ್ನೊಂದು ಹೆಸರಿನೊಂದಿಗೆ ಮುಕ್ಕೋಟಿ ದೇವತೆಗಳು ಹಸುವಿನಲ್ಲಿ ವಾಸ ಮಾಡುತ್ತಾರೆ ಎಂಬ ನಂಬಿಕೆ ಇದೆ. ಹಸುವಿನಿಂದ ಮನುಷ್ಯರಿಗೆ ಸಿಗುವ ಪ್ರತಿಯೊಂದು ಉತ್ಪನ್ನವು ಕೂಡ ಸಾಕಷ್ಟು ಪ್ರಯೋಜನಕ್ಕೆ ಬರುತ್ತದೆ.

“ಇಟ್ಟರೆ ಸಗಣಿಯಾದೆ ತಟ್ಟಿದರೆ ಉರುಳಾದೆ, ಸುಟ್ಟರೇ ನೊಸಲಿಗೆ ವಿಭೂತಿಯಾದೆ, ತಟ್ಟದೇ ಹಾಕಿದರೆ ಮೇಲುಗೊಬ್ಬರವಾದೆ ನೀನಾರಿಗಾದೆಯೋ ಎಲೆ ಮಾನವಾ, ಹರಿ ಹರೀ ಗೋವು ನಾನು ” ಎಂಬ ಪದಗಳ ತಾತ್ಪರ್ಯ ಇಂದು ಮನುಷ್ಯನ ಬಾಳ್ವೆಗೆ ಹಿಡಿದ ಕೈಗನ್ನಡಿಯಾಗಿದೆ.

ಹಾಗಾಗಿ ಹಸುವಿನ ಹಾಲಿಗೆ ನಾವು ಎಷ್ಟು ಪ್ರಾಮುಖ್ಯತೆ ಕೊಡುತ್ತೇವೆ ಅಷ್ಟೇ ಪ್ರಾಮುಖ್ಯತೆಯನ್ನು ಹಸುವಿನ ಮೂತ್ರಕ್ಕೆ ಸಹ ಕೊಡಬೇಕು. ಏಕೆಂದರೆ ಗೋಮೂತ್ರದಿಂದ ಅನೇಕ ಆರೋಗ್ಯ ಪ್ರಯೋಜನಗಳು ಸಿಗುತ್ತವೆ. ಬನ್ನಿ ಹಾಗಾದರೆ ಈ ಲೇಖನದಲ್ಲಿ ಗೋಮೂತ್ರದ ಥೆರಪಿಯ ಬಗ್ಗೆ ನಾವೆಲ್ಲರೂ ತಿಳಿದುಕೊಳ್ಳೋಣ.

ಇದಕ್ಕೂ ಮೊದಲು ಗೋಮೂತ್ರ ತನ್ನಲ್ಲಿ ಒಳಗೊಂಡಿರುವ ಕೆಲವೊಂದು ವಿಶೇಷ ಬಗೆಯ ಮನುಷ್ಯನಿಗೆ ಉಪಯುಕ್ತವಾದ ಅಂಶಗಳನ್ನು ನೋಡುವುದಾದರೆ ನೀರು, ಉಪ್ಪಿನ ಅಂಶ, ಯೂರಿಯಾ, ಖನಿಜಾಂಶಗಳು, ಹಾರ್ಮೋನುಗಳು ಇತ್ಯಾದಿ.

ಇಂದು ಮಾರುಕಟ್ಟೆಯಲ್ಲಿ ಗೋಮೂತ್ರ ಬಳಸಿಕೊಂಡು ತಯಾರು ಮಾಡುವ ಔಷಧೀಯ ಉತ್ಪನ್ನಗಳು ಸಾಕಷ್ಟು ಲಭ್ಯವಿವೆ. ಬಹುತೇಕ ಜನರಿಗೆ ಈ ಉತ್ಪನ್ನಗಳು ಜೀವರಕ್ಷಕವಾಗಿ ಅವರ ಆರೋಗ್ಯವನ್ನು ರಕ್ಷಣೆ ಮಾಡುತ್ತಿವೆ. ಆರೋಗ್ಯ ತಜ್ಞರು ಗೋಮೂತ್ರದ ಥೆರಪಿಎಂದು ಕರೆದಿದ್ದಾರೆ.

ಗೋಮೂತ್ರದ ಥೆರಪಿ ಎಂದರೇನು?-ಸಾಮಾನ್ಯ ಜನರಿಗೆ ಅರ್ಥವಾಗುವ ಹಾಗೆ ಹೇಳಬೇಕು ಎಂದರೆ ಸ್ವಲ್ಪ ಪ್ರಮಾಣದ ಹಸುವಿನ ಗಂಜಲವನ್ನು ಹಸುವಿನ ಇನ್ನಿತರ ಉತ್ಪನ್ನಗಳೊಂದಿಗೆ ಬೆರೆಸಿ ಜೊತೆಗೆ ಆಯುರ್ವೇದಿಕ ಗಿಡಮೂಲಿಕೆಗಳನ್ನು ಸಹ ಉಪಯೋಗಿಸಿ ತಯಾರು ಮಾಡುವ ನೈಸರ್ಗಿಕ ಔಷಧಿ ಎಂದರೆ ಅದುವೇ ಗೋಮೂತ್ರದ ಥೆರಪಿ.

ಇಲ್ಲಿ ಗಮನಿಸಬೇಕಾದ ಒಂದು ಅಂಶ ಎಂದರೆ ಮನುಷ್ಯನಿಗೆ ಆರೋಗ್ಯ ಪ್ರಯೋಜನಗಳು ಸಿಗಲಿ ಎನ್ನುವ ಕಾರಣಕ್ಕೆ ಗೋಮೂತ್ರದ ಥೆರಪಿಯಲ್ಲಿ ಗಂಜಲವನ್ನು ಸ್ವಲ್ಪ ಹೆಚ್ಚಿನ ಪ್ರಮಾಣದಲ್ಲಿ ಉಪಯೋಗಿಸುತ್ತಾರೆ.

ಮನುಷ್ಯನ ದೇಹದ ಮೇಲೆ ಗೋಮೂತ್ರ ಕೆಲಸ ಮಾಡುವ ರೀತಿ ನಿಜಕ್ಕೂ ಅಚ್ಚರಿ ಮೂಡಿಸುತ್ತದೆ. ದೇಹದಿಂದ ವಿಷಕಾರಿ ಅಂಶಗಳನ್ನು ತೆಗೆದು ಹಾಕಿ ದೈಹಿಕ ದುರ್ಬಲತೆಯನ್ನು, ಸುಸ್ತು ಮತ್ತು ಆಯಾಸವನ್ನು ದೂರ ಮಾಡುತ್ತದೆ.

ದೇಹದ ರೋಗ ನಿರೋಧಕ ವ್ಯವಸ್ಥೆಯನ್ನು ಬಲಗೊಳಿಸುವ ಜೊತೆಗೆ ದೇಹದಲ್ಲಿ ಜೀರ್ಣ ಶಕ್ತಿಯನ್ನು ಅಭಿವೃದ್ಧಿ ಪಡಿಸಿ ದೈಹಿಕವಾಗಿ ನಿಮಗೆ ಅಗತ್ಯವಿರುವ ಪೌಷ್ಟಿಕ ಸತ್ವಗಳನ್ನು ಒದಗಿಸುತ್ತದೆ. ನೀವು ಸೇವನೆ ಮಾಡುವ ಆಹಾರದಲ್ಲಿ ಕಂಡುಬರುವ ಪೌಷ್ಟಿಕ ಸತ್ಯಗಳನ್ನು ನಿಮ್ಮ ದೇಹ ಹೀರಿಕೊಳ್ಳುವಂತೆ ನಿಮ್ಮ ದೇಹವನ್ನು ತಯಾರಿ ಮಾಡುತ್ತದೆ.

ಗೋಮೂತ್ರದಲ್ಲಿ ಶಕ್ತಿಯುತವಾದ ಆಂಟಿ ಬಯೋಟಿಕ್ ಮತ್ತು ಕೀಟನಾಶಕ ಗುಣಗಳು ಕಂಡು ಬರುವುದರಿಂದ ದೇಹದಲ್ಲಿ ಸಿಗುವ ರೋಗಕಾರಕ ಸೂಕ್ಷ್ಮಾಣುಗಳನ್ನು ಕೊಲ್ಲುವಲ್ಲಿ ಇದು ಪ್ರಮುಖ ಪಾತ್ರ ವಹಿಸುತ್ತದೆ. ನಿಯಮಿತವಾಗಿ ಸ್ವಲ್ಪ ಪ್ರಮಾಣದಲ್ಲಿ ಗೋಮೂತ್ರದ ಥೆರಪಿತೆಗೆದುಕೊಳ್ಳುವುದರಿಂದ ದಿನ ಕಳೆದಂತೆ ವ್ಯಕ್ತಿಯ ರೋಗ ನಿರೋಧಕ ಶಕ್ತಿ ಕೂಡ ಹೆಚ್ಚಾಗುತ್ತದೆ.

ಪಂಚಗವ್ಯದ ಬಗ್ಗೆ ಒಂದಿಷ್ಟು ಮಾಹಿತಿ–ಇಲ್ಲಿ ಹಸುವಿನ ಸರಿಸುಮಾರು 5 ಉತ್ಪನ್ನಗಳನ್ನು ಬಳಕೆ ಮಾಡಿ ಒಂದು ಔಷಧೀಯ ಉತ್ಪನ್ನವನ್ನು ತಯಾರು ಮಾಡುತ್ತಾರೆ. ಉದಾಹರಣೆಗೆ ಹಸುವಿನ ಹಾಲು, ತುಪ್ಪ, ಮೊಸರು, ಹಸುವಿನ ಸಗಣಿ ಮತ್ತು ಗಂಜಳ.

ಗೋಮೂತ್ರದ ಥೆರಪಿಯಲ್ಲಿ ಈ ಎಲ್ಲಾ ಬಗೆಯ ಪದಾರ್ಥಗಳು ಬಳಕೆಯಾಗುತ್ತವೆ. ಆಯುರ್ವೇದ ಪ್ರಕಾರದಲ್ಲಿ ನೋಡುವುದಾದರೆ ಎಪಿಲೆಪ್ಸಿ ಮತ್ತು ಲೆಪ್ರೋಸಿ ಸಮಸ್ಯೆಗಳಿಗೂ ಸಹ ಗೋಮೂತ್ರದಲ್ಲಿ ಪರಿಣಾಮಕಾರಿಯಾದ ಪರಿಹಾರವಿದೆ ಎಂದು ತಿಳಿದುಬಂದಿದೆ.

ಬೇರೆ ಯಾವೆಲ್ಲಾ ಆರೋಗ್ಯ ಸಮಸ್ಯೆಗಳಿಗೆ ಗೋಮೂತ್ರ ಪರಿಹಾರ ಎಂದು ಹೇಳಬಹುದು?

ಅಸಂಖ್ಯಾತ ಕಾಯಿಲೆಗಳಿಗೆ ಗೋಮೂತ್ರದ ಥೆರಪಿಪರಿಹಾರ ಎಂಬುದು ಎಲ್ಲರಿಗೂ ತಿಳಿದಿದೆ. ಏಕೆಂದರೆ ಇದು ಈಗ ಹೊಸದಾಗಿ ಬಳಕೆಯಾಗುತ್ತಿರುವ ಪದ್ಧತಿಯಲ್ಲ.ಬಹಳಷ್ಟು ಹಿಂದಿನ ಕಾಲದಿಂದ ಯಾವುದೇ ಆಸ್ಪತ್ರೆಗಳು ಔಷಧಿಗಳು ಇಲ್ಲದೆ ಇರುವ ಸಂದರ್ಭದಲ್ಲಿ ಜನರಿಗೆ ಬರುತ್ತಿದ್ದ ಮಾರಕ ಆರೋಗ್ಯ ಸಮಸ್ಯೆಗಳಿಗೆ ಅಂದಿನ ಆಯುರ್ವೇದ ಪಂಡಿತರು ಪಂಚಗವ್ಯ ಪದ್ಧತಿಯ ಮೂಲಕ ಬಹಳ ಶಕ್ತಿಯುತವಾದ ಚಿಕಿತ್ಸೆ ಒದಗಿಸಿ ಜನರ ಆರೋಗ್ಯವನ್ನು ಸರಿಪಡಿಸುತ್ತಿದ್ದರು.

ಹಾಗಾಗಿ ಈಗಲೂ ಸಹ ಹಳ್ಳಿಗಳ ಕಡೆ ಈ ಪದ್ಧತಿ ಚಾಲ್ತಿಯಲ್ಲಿದೆ. ಜನರಿಗೆ ಕೆಮ್ಮು, ಕಫ, ಮಲಬದ್ಧತೆ, ಚರ್ಮದ ಮೇಲೆ ಕಂಡು ಬರುವ ಕಜ್ಜಿ, ಹುಳುಕಡ್ಡಿ, ಇಸುಬು, ಕ್ಯಾನ್ಸರ್, ಲೈಂಗಿಕ ಕಾಯಿಲೆಗಳು, ಹೃದಯದ ಸಮಸ್ಯೆಗಳು, ಪುರುಷರ ಜನನಾಂಗದ ಅಸ್ವಸ್ಥತೆಗಳು, ಮಾನಸಿಕ ಅಸ್ವಸ್ಥತೆ, ಉಸಿರಾಟದ ವ್ಯವಸ್ಥೆ, ಮೂತ್ರ ವ್ಯವಸ್ಥೆಯ ತೊಂದರೆ, ಅಸ್ತಮಾ, ರಕ್ತದ ಒತ್ತಡ ಇತ್ಯಾದಿಗಳಿಗೆ ಪರಿಹಾರವಾಗಿ ಕೆಲಸ ಮಾಡುತ್ತದೆ. ಆದರೆ ನಿಯಮಿತವಾಗಿ ಮಿತ ಪ್ರಮಾಣದಲ್ಲಿ ಇದನ್ನು ಸೇವನೆ ಮಾಡಬೇಕು ಅಷ್ಟೇ.

ಇಂದಿನ ಆಧುನಿಕ ಔಷಧೀಯ ವ್ಯವಸ್ಥೆಗೆ ಸೆಡ್ಡು ಹೊಡೆಯುತ್ತದೆ–ಕೆಲವೊಂದು ಆರೋಗ್ಯ ಸಮಸ್ಯೆಗಳಿಗೆ ಇಂದಿನ ಆಧುನಿಕ ಪದ್ಧತಿಯಲ್ಲಿ ಈಗಲೂ ಕೂಡ ಹೌಷದ ಲಭ್ಯವಿಲ್ಲ. ಹಾಗಾಗಿ ಜನರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಆದರೆ ಸಾಂಪ್ರದಾಯಿಕ ಔಷಧೀಯ ಪದ್ಧತಿಯಲ್ಲಿ ಇದಕ್ಕೆಲ್ಲ ಅವಕಾಶವೇ ಇಲ್ಲ.

ಸಾಕಷ್ಟು ಬಗೆಯ ಆರೋಗ್ಯ ಸಮಸ್ಯೆಗಳಿಗೆ ಇಂದಿಗೂ ಕೂಡ ವಿಜ್ಞಾನಿಗಳು ಮತ್ತು ಸಂಶೋಧಕರು ತಲೆ ಕೆಡಿಸಿಕೊಂಡು ಕುಳಿತಿರುವ ಸಂದರ್ಭದಲ್ಲಿ ಅತ್ಯಂತ ಸುಲಭವಾಗಿ ಕೇವಲ ನಿಸರ್ಗದ ಉತ್ಪನ್ನಗಳಿಂದ ಪರಿಹಾರವನ್ನು ಒದಗಿಸುವ ಕೆಲಸವನ್ನು ಆಯುರ್ವೇದ ಚಿಕಿತ್ಸಾ ಪದ್ಧತಿ ಮಾಡುತ್ತದೆ.

ಪ್ರಮುಖವಾಗಿ ಹೇಳಬೇಕು ಎಂದರೆ ನಮ್ಮ ದೇಹದಲ್ಲಿ ಕಂಡುಬರುವ ಕೊಲೆಸ್ಟ್ರಾಲ್ ಅಂಶದ ನಿಯಂತ್ರಣ ದಿಂದ ಹಿಡಿದು ನಮ್ಮ ಬುದ್ಧಿಶಕ್ತಿಯನ್ನು ವೃದ್ಧಿಸುವಲ್ಲಿ, ಲಿವರ್ ಭಾಗದ ಆರೋಗ್ಯವನ್ನು ಅಭಿವೃದ್ಧಿಪಡಿಸುವಲ್ಲಿ, ವಯಸ್ಸಾಗುವಿಕೆ ಪ್ರಕ್ರಿಯೆಯನ್ನು ನಿಧಾನಗೊಳಿಸುವಲ್ಲಿ, ಹೃದಯದ ಮತ್ತು ಮೆದುಳಿನ ಕಾರ್ಯ ಪ್ರವೃತ್ತಿಯನ್ನು ಹೆಚ್ಚಿಸುವಲ್ಲಿ ಜೊತೆಗೆ ದೇಹದಿಂದ ವಿಷಕಾರಿ ತ್ಯಾಜ್ಯಗಳನ್ನು ಹೊರಹಾಕುವಲ್ಲಿ ಹಸುವಿನ ಗಂಜಲ ಪ್ರಮುಖ ಪಾತ್ರವಹಿಸುತ್ತದೆ.

ರೋಗನಿರೋಧಕ ಶಕ್ತಿ ಬಲಗೊಳಿಸುತ್ತದೆ

ಈಗಿನ ಕಾಲಕ್ಕೆ ಹೋಲಿಸಿ ನೋಡಿದರೆ ಹಸುವಿನ ಗಂಜಲದಿಂದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವುದು ಎಂದರೆ ಯಾರು ಸಹ ಹಿಂದೇಟು ಹಾಕುವುದಿಲ್ಲ.

ಏಕೆಂದರೆ ಹೊರಗಿನ ಪರಿಸ್ಥಿತಿ ಅದೇ ರೀತಿ ಇದೆ. ಹಸುವಿನ ಪ್ರತಿಯೊಂದು ಉತ್ಪನ್ನವು ಶ್ರೇಷ್ಠವಾಗಿ ಯಾವುದೇ ಅಡ್ಡ ಪರಿಣಾಮಗಳನ್ನು ಉಂಟು ಮಾಡದೆ ಇರುವುದರಿಂದ ಮತ್ತು ಈಗಾಗಲೇ ಅಮೇರಿಕಾದ ಒಂದು ಸಂಶೋಧನಾ ಸಂಸ್ಥೆ ಈ ವಿಚಾರವಾಗಿ ಸತ್ಯಾಸತ್ಯತೆಯನ್ನು ವರದಿಯ ಮೂಲಕ ಬಹಿರಂಗಪಡಿಸಿರುವುದರಿಂದ ಗೋಮೂತ್ರದ ಥೆರಪಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಅತ್ಯುತ್ತಮವಾಗಿ ಕೆಲಸ ಮಾಡುತ್ತದೆ ಎಂದು ಸಾಬೀತಾಗಿದೆ.

ಪ್ರತಿದಿನ ನಿಯಮಿತವಾಗಿ ಸ್ವಲ್ಪ ಪ್ರಮಾಣದಲ್ಲಿ ಗೋಮೂತ್ರವನ್ನು ಸೇವನೆ ಮಾಡುವುದರಿಂದ ದೇಹದ ಉಷ್ಣಾಂಶ ಸಮತೋಲನಗೊಳ್ಳುತ್ತದೆ. ಸಣ್ಣ ಪುಟ್ಟ ಆರೋಗ್ಯ ಸಮಸ್ಯೆಗಳಿಂದ ಬಳಲುವ ತೊಂದರೆ ಇರುವುದಿಲ್ಲ.

ದೇಹದ ರೋಗ ನಿರೋಧಕ ಶಕ್ತಿಯನ್ನು ಅತ್ಯುತ್ತಮವಾಗಿ ಹೆಚ್ಚಿಸುವ ಗುಣವನ್ನು ಗೋಮೂತ್ರ ಪಡೆದುಕೊಂಡಿದೆ. ವಿವಿಧ ಬಗೆಯ ಗಿಡಮೂಲಿಕೆಗಳನ್ನು ಸಹ ಬಳಕೆ ಮಾಡುವುದರಿಂದ ದೇಹದಿಂದ ವಿಷಕಾರಿ ಅಂಶಗಳು ಗೋಮೂತ್ರದಲ್ಲಿ ಕಂಡುಬರುವ ಆಂಟಿಆಕ್ಸಿಡೆಂಟ್ ಅಂಶಗಳ ಪ್ರಭಾವದಿಂದ ದೂರವಾಗುತ್ತದೆ.

ಚರ್ಮದ ಮೇಲಿನ ಗಾಯ ವಾಸಿ ಮಾಡುತ್ತದೆ

ಗೋಮೂತ್ರ ಥೆರಪಿಯಿಂದ ಕೇವಲ ದೇಹದ ಒಳ ಭಾಗಕ್ಕೆ ಮಾತ್ರ ಅನುಕೂಲವಿದೆ ಎಂದುಕೊಳ್ಳಬೇಡಿ. ಮಧುಮೇಹ ಸಮಸ್ಯೆ ಹೊಂದಿರುವವರಿಗೆ ಚರ್ಮದ ಮೇಲೆ ಗಾಯಗಳಾದರೆ ಅಷ್ಟು ಬೇಗನೆ ವಾಸಿಯಾಗುವುದಿಲ್ಲ.

ಆದರೆ ಗೋಮೂತ್ರ ಥೆರಪಿಯಲ್ಲಿ ಬಳಕೆಯಾಗಿರುವ ಪಂಚಕವ್ಯ ಪ್ರಭಾವದಿಂದ ಬಹಳ ವೇಗವಾಗಿ ಗಾಯಗಳು ವಾಸಿಯಾಗಿ ದೇಹದ ಚರ್ಮ ಮತ್ತೆ ಮೊದಲಿನಂತೆ ಆಗುತ್ತದೆ.

ಮೂತ್ರ ವ್ಯವಸ್ಥೆಯ ಅಚ್ಚುಕಟ್ಟಾದ ನಿರ್ವಹಣೆ

ದಿನಕಳೆದಂತೆ ಮನುಷ್ಯನ ಮೂತ್ರಪಿಂಡಗಳು ತಮ್ಮ ಕಾರ್ಯನಿರ್ವಹಣೆಯನ್ನು ಕಡಿಮೆ ಮಾಡುತ್ತ ಬರುತ್ತದೆ ಎಂದು ಹೇಳುತ್ತಾರೆ.

ಏಕೆಂದರೆ ಮನುಷ್ಯನ ಕೆಲವೊಂದು ವಿಶೇಷ ಬಗೆಯ ಅನಾರೋಗ್ಯಕರ ಆಹಾರ ಪದ್ಧತಿಯಿಂದ ಸಹಜವಾಗಿ ಮೂತ್ರಪಿಂಡಗಳ ಕಾರ್ಯ ನಿರ್ವಹಣೆಗೆ ತೊಂದರೆ ಉಂಟಾಗುತ್ತದೆ ಮತ್ತು ಅವುಗಳ ಮೇಲೆ ಇದ್ದಕ್ಕಿದ್ದಂತೆ ಒತ್ತಡ ಜಾಸ್ತಿಯಾಗುತ್ತದೆ.

ಹೀಗಿರುವ ಸಂದರ್ಭದಲ್ಲಿ ಈ ರೀತಿಯ ಸಮಸ್ಯೆ ಎದುರಾಗಬಾರದು ಎಂದರೆ ಮೊದಲಿನಿಂದಲೇ ಗೋಮೂತ್ರವನ್ನು ಸ್ವಲ್ಪ ಪ್ರಮಾಣದಲ್ಲಿ ಸೇವನೆ ಮಾಡುತ್ತ ಬರುವುದು ಅನುಕೂಲಕರ ಎಂದು ಹೇಳಬಹುದು.ಇದರಿಂದ ಯಾವುದೇ ಸಂದರ್ಭದಲ್ಲಿ ಕಿಡ್ನಿಗಳಲ್ಲಿ ಕಲ್ಲುಗಳು ಉಂಟಾಗುವುದು ತಪ್ಪುತ್ತದೆ. ಮೂತ್ರ ಪಿಂಡಗಳ ಸ್ವಚ್ಛತೆಯಲ್ಲಿ ಕೂಡ ಇವುಗಳು ನೆರವಾಗುತ್ತವೆ ಎಂದು ಹೇಳಬಹುದು.

ಕ್ಯಾನ್ಸರ್ ಕಾಯಿಲೆ ಇರುವವರಿಗೆ ಕೂಡ ಸಾಕಷ್ಟು ಪ್ರಯೋಜನಕಾರಿ

ಬಹಳಷ್ಟು ಸಂಶೋಧನೆಗಳು ಹೇಳಿರುವ ಹಾಗೆ, ಗೋಮೂತ್ರದಲ್ಲಿ ಆಂಟಿ ಆಕ್ಸಿಡೆಂಟ್ ಅಂಶಗಳು ಸಾಕಷ್ಟು ಕಂಡುಬರುವ ಕಾರಣ ದೇಹದ ಉರಿಯೂತವನ್ನು ಕಡಿಮೆ ಮಾಡುವಲ್ಲಿ ಇವುಗಳು ಕೆಲಸ ಮಾಡುತ್ತವೆ.

ಹಾಗಾಗಿ ಗೋಮೂತ್ರ ಥೆರಪಿಯನ್ನು ಆಂಟಿ ಕ್ಯಾನ್ಸರ್ ಥೆರಪಿಎಂದು ಸಹ ಕರೆಯುತ್ತಾರೆ. ಕ್ಯಾನ್ಸರ್ ಸಮಸ್ಯೆ ಕಂಡು ಬಂದ ನಂತರದಲ್ಲಿ ಉಂಟಾಗುವ ಕೆಲವೊಂದು ರೋಗಲಕ್ಷಣಗಳಿಗೆ ಇದು ಪರಿಹಾರ ಎಂದು ಹೇಳಬಹುದು.

ಮುನ್ನೆಚ್ಚರಿಕಾ ಕ್ರಮಗಳು ಹೀಗಿರಲಿ

ನೈಸರ್ಗಿಕ ವಿಧಾನದಲ್ಲಿ ಸಿಗುವಂತಹ ಎಲ್ಲಾ ಬಗೆಯ ಚಿಕಿತ್ಸೆಗಳು ಎಲ್ಲರ ದೇಹಕ್ಕೆ ಅನುಕೂಲಕಾರಿಯಾಗಿ ಕೆಲಸ ಮಾಡುತ್ತವೆಯೆಂದು ಹೇಳುವುದಕ್ಕೆ ಬರುವುದಿಲ್ಲ.

ಹಾಗಾಗಿ ನೀವಾಗಿಯೇ ಇಂತಹ ಪದ್ಧತಿಗಳಿಗೆ ಒಳಗಾಗುವ ಮೊದಲು ನಿಮ್ಮ ಸದ್ಯದ ಆರೋಗ್ಯ ಪರಿಸ್ಥಿತಿ, ನೀವು ತೆಗೆದುಕೊಳ್ಳುತ್ತಿರುವ ಔಷಧಿಗಳ ವಿವರ ಎಲ್ಲವನ್ನು ವೈದ್ಯರ ಬಳಿ ಹೇಳಿ.

ಗೋಮೂತ್ರ ಥೆರಪಿಯನ್ನು ಪ್ರಾರಂಭ ಮಾಡಿದ ನಂತರ ನಿಮಗೆ ಕಂಡುಬರುವ ಯಾವುದೇ ಅಡ್ಡ ಪರಿಣಾಮಗಳನ್ನು ನಿರ್ಲಕ್ಷ ಮಾಡಬೇಡಿ. ತಕ್ಷಣವೇ ಅದನ್ನು ಸಹ ವೈದ್ಯರಿಗೆ ತಿಳಿಸಿ ಸೂಕ್ತ ಸಲಹೆಗಳನ್ನು ಪಡೆದುಕೊಳ್ಳಿ.

https://youtu.be/Zxq2-QxO7q4?si=uQPMYwowf8G3BDQT

Related Post

Leave a Comment